ಮಹಾಕುಂಭಮೇಳ: ದರದ ಹೊರ ತಪ್ಪಿಸಿ-ಗಗನ್ ದೀಪ್

ಮೈಸೂರು: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ರಾಜ್ಯದ ಜನರು ಭಾಗಿ ಆಗುತ್ತಿದ್ದಾರೆ.

ಇನ್ನೂ ಬಹಳಷ್ಟು ಮಂದಿ ಕುಂಭಮೇಳಕ್ಕೆ ಹೋಗಲು ಉತ್ಸುಕರಾಗಿದ್ದಾರೆ, ಆದರೆ ಅವರಿಗೆ ಬಸ್, ರೈಲು,ವಿಮಾನದ ಪ್ರಯಾಣ ದರ ಭಾರಿ ಹೊರೆಯಾಗಿದೆ,ಹಾಗಾಗಿ ಟಿಕೆಟ್ ದರ ಕಡಿಮೆ ಮಾಡಿ ಹೊರೆಯನ್ನು ತಪ್ಪಿಸಬೇಕು ಎಂದು ಸಮಾಜ ಸೇವಕರಾದ ಗಗನ್ ದೀಪ್ ಒತ್ತಾಯಿಸಿದ್ದಾರೆ.

ಜೀವದ ಹಂಗುತೊರೆದು ನಿತ್ಯ ಸಾವಿರಾರು ಜನರು ಭಕ್ತಿಯಿಂದ ಪ್ರಯಾಗರಾಜ್‌ಗೆ ತೆರಳಿ ಪುಣ್ಯಸ್ನಾನ ಮಾಡಿ, ಮೋಕ್ಷ ಪ್ರಾಪ್ತಿಗೆ ಪ್ರಾರ್ಥಿಸುತ್ತಾರೆ. ಅನೇಕರು ಗುಂಪು ಕಟ್ಟಿಕೊಂಡು ಪ್ರತ್ಯೇಕ ಖಾಸಗಿ ವಾಹನದ ಮೂಲಕ ಪಾಲ್ಗೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಆದರೆ ಜನರ ಪ್ರಯಾಣಕ್ಕೆ ವಿಶೇಷ ವಾಹನ ವ್ಯವಸ್ಥೆ ಇಲ್ಲದಾಗಿದೆ. ಪ್ರಯಾಣ ದರ ಹೆಚ್ಚಿಸಲಾಗಿದ್ದು, ಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ. ಪ್ರಯಾಣ ದರ ಎಲ್ಲರಿಗೂ ನಿಲುಕುವಂತೆ ಮಾಡ ಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗಗನ್ ದೀಪ್ ಆಗ್ರಹಿಸಿದ್ದಾರೆ.