ದೀಪಾವಳಿಗೆ ವಿಮಾ ವಿ ರಾಮಪ್ರಸಾದ್ ನೇತೃತ್ವದಲ್ಲಿ ಹಣತೆ ವಿತರಣೆ

Spread the love

ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ 55ನೇ ವಾರ್ಡಿನಲ್ಲಿ ಮಾ ವಿ ರಾಮಪ್ರಸಾದ್ ಅವರ ನೇತೃತ್ವದಲ್ಲಿ ವಾರ್ಡಿನ ಎಲ್ಲಾ ಮನೆಗಳಿಗೂ ಹಣತೆಗಳನ್ನು ಹಂಚಲಾಯಿತು.

ಆದಷ್ಟು ಶಬ್ದ ಬರುವ ಪಟಾಕಿಯಿಂದ ದೂರವಿರಿ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಿ, ಪಟಾಕಿಯಿಂದ ಎಷ್ಟೋ ಜನ ತಮ್ಮ ಕಣ್ಣುಗಳನ್ನು ಕಳೆದುಕೊಂಡ ಉದಾಹರಣೆ ಗಳು ಇವೆ ಆದ್ದರಿಂದ ಜಾಗೃತರಾಗಿರಬೇಕೆಂದು ಜನರಲ್ಲಿ ಮನವಿ ಮಾಡಲಾಯಿತು.

ನಂತರ ಮಾಾವಿ ರಾಮಪ್ರಸಾದ್ ಅವರ ಪುತ್ರ ಹಾಗೂ ಬಿಜೆಪಿ ಯುವ ಮುಖಂಡರಾದ ಅದ್ವೈತ್ ಜೀವತ್ಸಾ ಅವರು ಪೌರಕಾರ್ಮಿಕರಿಗೆ ಮಣ್ಣಿನ ಹಣತೆಗಳನ್ನು ಕೊಟ್ಟು ಸಿಹಿ ಹಂಚಿ ಪೌರಕಾರ್ಮಿಕರ ಜೊತೆ ದೀಪಾವಳಿಯನ್ನು ಆಚರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿಮಂಜುನಾಥ್ ,
ಧರ್ಮೇಂದ್ರ ,ಲಕ್ಷ್ಮೀನಾರಾಯಣ್ ,ನಿರಂಜನ್, ಮಧು ,ಸೋಮೇಶ್ ,ಶಿವು ,ಶಂಕರ್, ಕಿರಣ್ ಮುಂತಾದವರು ಹಾಜರಿದ್ದರು.