ರಾಮನಗರದ ಪಿರಮಿಡ್ ಧ್ಯಾನ ಕೇಂದ್ರದಲ್ಲಿ‌ಅರ್ಥಪೂರ್ಣವಾಗಿ ನಡೆದ‌ ಸತ್ಸಂಗ

Spread the love

ರಾಮನಗರ: ರಾಮನಗರದ ಪಿರಮಿಡ್ ಧ್ಯಾನ ಕೇಂದ್ರದಲ್ಲಿ‌ ಪಿರಮಿಡ್ ಮಾಸ್ಟರ್ ಗುಬ್ಬಿ ಅವರು ಹಮ್ಮಿಕೊಂಡಿದ್ದ ಸತ್ಸಂಗ ಅರ್ಥಪೂರ್ಣ ವಾಗಿತ್ತು.

ರಾಮನಗರ ಪಿರಮಿಡ್ ಧ್ಯಾನ ಕೇಂದ್ರದ ಸಂಸ್ಥಾಪಕರಾದ ಕೃಷ್ಣಪ್ಪ ಅವರು ನಾವು ನಮ್ಮ ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬುದರ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿದ ಗುಬ್ಬಿಯ ನಿಖಿತಾ ಅವರಿಗೆ ಅಭಿನಂದಿಸಿದರು.

ಬ್ರಹ್ಮರ್ಷಿ ಪಿತಾಮಹ ಡಾ. ಸುಭಾಷ್ ಪತ್ರಿಯವರ ಜೀವನದ ಲೋಕಕಲ್ಯಾಣ ಸಂಕಲ್ಪವನ್ನು ನಿಖಿತಾ ಅವರು ಸತ್ಸಂಗದಲ್ಲಿ ತಿಳಿಸಿಕೊಟ್ಟರು.

ಬ್ರಹ್ಮರ್ಷಿ ಪಿತಾಮಹ ಪತ್ರೀಜಿ ಯವರಿಗೆ ನಿಖಿತಾ ಅವರು ತಾವೇ ರಚಿಸಿದ ಗೀತೆಯನ್ನು ಗುರುಕಾಣಿಕೆಯಾಗಿ ಎಲ್ಲರ ಸಮ್ಮುಖದಲ್ಲಿ ಹಾಡಿ ಗುರುನಮನ ಅರ್ಪಿಸಿದರು.

ಕೃಷ್ಣವೇಣಿ, ಮಂಜುಳಾ, ಲಲಿತ ಐಯ್ಯರ್, ಪಾರ್ವತಮ್ಮ, ಸತ್ಯನಾರಾಯಣ,ಎನ್. ಗಂಗ ನರಸಿಂಹಯ್ಯ ಮತ್ತಿತರ ಧ್ಯಾನಿಗಳು ಉಪಸ್ಥಿತರಿದ್ದರು.