ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಮುಂದೂಡಲು ನಿರ್ಧಾರ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬವನ್ನು ಕುಲದ ಶಿಷ್ಟಾಚಾರ ಪಾಲನೆಯಿಲ್ಲದೆ 16 ಬೀದಿಗಳ ಏಜೆಂಟರು, ಕುಲಸ್ಥರು ಮತ್ತು ಶೆಟ್ಟಿಗಾರರ ಅನುಮತಿ ಇಲ್ಲದೆ ಕೆಲವರು ಸಮಿತಿಯ ಮೂಲಕ ಕತ್ತಿ ಹಬ್ಬವನ್ನು ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿರುವ ಸಮುದಾಯದ ಮುಖಂಡರು ಹಬ್ಬವನ್ನು ಮುಂದೂಡಿದ್ದಾರೆ.

ಪಟ್ಟಣದಲ್ಲಿ ಆಂಧ್ರ ದೇವಾಂಗ ಸಮುದಾಯ ತಮ್ಮ ಕುಲದೇವತೆಯಾದ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿ ಹಬ್ಬವನ್ನು 20-07-1921 ರಿಂದ 28-07-1921, 09-02-1962 ರಿಂದ 17-02-1962, 24-05-1982 ರಿಂದ 31-05-1982, 20-01-1999 ರಿಂದ 28-01-1999, 22-01-2015 ರಿಂದ 01-02-2015 ರಲ್ಲಿ ನಡೆಸಿಕೊಂಡು ಬಂದಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಈ ಪ್ರಸಿದ್ಧ ದೊಡ್ಡ ಕತ್ತಿಹಬ್ಬ ಆಚರಣೆ ವಿಚಾರವಾಗಿ ಗೊಂದಲ ಉಂಟಾದ ಕಾರಣ 4-02-2026 ರಿಂದ 18-02-2026 ವರೆಗೆ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿಹಬ್ಬ ಸೇವಾ ಸಮಿತಿ ವತಿಯಿಂದ ನಡೆಯಬೇಕಿದ್ದ ಹಬ್ಬ ಸಮುದಾಯದ ಯಜಮಾನರು ಹಾಗೂ ಕುಲಸ್ತರ ಸಮ್ಮತಿ ಇಲ್ಲದ ಕಾರಣ ಹಬ್ಬವನ್ನು ಮುಂದೂಡುವಂತಾಗಿದೆ, ಇದರಿಂದಾಗಿ ಹಬ್ಬ ಆಚರಣೆ ಸೇವಾ ಸಮಿತಿಗೆ ಹಿನ್ನಡೆಯಾಗಿದೆ.

ಸಿ.ಎಂ. ಪರಮೇಶ್ವರಯ್ಯ (ಚಿಂತು)ಅವರ ಅಧ್ಯಕ್ಷತೆಯಲ್ಲಿ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿಹಬ್ಬ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ 4-02-2026 ರಿಂದ 18-02-2026 ವರೆಗೆ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿ ಹಬ್ಬ ನಡೆಸಲು ಮುಂದಾಗಿದ್ದರು. ಆಚರಣಾ ಸಮಿತಿಯ ಸಲಹಾ ಸಮಿತಿ ಸದಸ್ಯರುಗಳಾಗಿ ಬಿ.ಸಿ. ಅಣಾದ್ರಯ್ಯ, ಹಾಗೂ ಡಿ.ವಿ. ಚಂದ್ರಶೇಖರ್, ಅಧ್ಯಕ್ಷರಾಗಿ ಸಿ.ಎಂ. ಪರಮೇಶ್ವರಯ್ಯ (ಚಿಂತು), ಪ್ರಧಾನ ಕಾರ್ಯದರ್ಶಿಯಾಗಿ ಜಿ.ಶ್ರೀ ನೀವಾಸ್, ಖಜಾಂಚಿಯಾಗಿ ಜಿ.ಸಿ. ಉಮಾಶಂಕರ್, ಉಪಾಧ್ಯಕ್ಷರುಗಳಾಗಿ ಎನ್.ಗಿರೀಶ್ ಬಾಬು, ಕೆ.ಸಿ.ರಾಮಯ್ಯ, ಕೆ.ಗೋಪಿನಾಥ್, ಸಿ.ಚೇತನ್ , ಎಸ್.ಮಂಜುನಾಥ್, ಜೆ. ಸುಂದರೇಶ್ ಕುಮಾರ್, ಟಿ.ಎಲ್.ಕೃಷ್ಣಯ್ಯ. ಕಾರ್ಯದರ್ಶಿಗಳಾಗಿ ಎಂ.ಎನ್ ಪರಮೇಶ್ವರಯ್ಯ, ಬಿ.ಎಲ್.ಮನೋಹರ್, ವಿ.ಸುರೇಂದ್ರ, ಜಿ.ಪಿ.ಶ್ರೀನೀವಾಸ್, ಬಿ.ಎನ್. ರವಿಬಾಬು, ಬಿ.ಎನ್. ಶಿವಾನಂದ ಸ್ವಾಮಿ, ಎನ್. ರಾಜು, ಯುವ ಅಧ್ಯಕ್ಷರಾಗಿ ಕೆ.ಎಸ್.ಕಿರಣ್ ರವರನ್ನೊಳಗೊಂಡವರ ಸಮಿತಿ ಮಾಡಿಕೊಂಡು ದೊಡ್ಡ ಕತ್ತಿ ಹಬ್ಬ ಆಚರಣೆಗೆ ಮುಂದಾಗಿದ್ದ ಈ ಸಮಿತಿ ಇದೇ ಅ.6 ರಂದು ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಹಬ್ಬದ ಆಚರಣೆ ಸಂಬಂಧ ಸಭೆ ನಡೆಸಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಸಂಸದ ಸುನಿಲ್ ಬೋಸ್ ಅವರ ಸಮ್ಮುಖದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿಹಬ್ಬ ಲಾಂಛನ ಉದ್ಘಾಟನೆ ಹಾಗೂ ಕಾರ್ಯಕ್ರಮಗಳಿಗೆ ಚಾಲನೆ  ನೀಡಿತ್ತು.

ಇದೇ ವೇಳೆ ಈ ದೊಡ್ಡ ಕತ್ತಿ ಹಬ್ಬ ನಡೆಸಲು 75 ಲಕ್ಷ ದಿಂದ 80 ಲಕ್ಷ ರೂ.ಗಳು ಖರ್ಚಾಗಬಹುದೆಂದು ಅಂದಾಜಿಸಿ ದಾನಿಗಳಿಂದ ಧನ ಸಹಾಯನ್ನು ಕೋರಿತ್ತು.

ಆದರೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸಮುದಾಯದ ದೊಡ್ಡ ಯಜಮಾನರಾದ ಅಚ್ಗಾಳ್ ನಾಗರಾಜಯ್ಯ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿರುವ ದೇವಾಂಗ ಸಮುದಾಯದ ಮುಖಂಡರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಚ್ಗಾಳ್ ನಾಗರಾಜಯ್ಯ ಅವರು ನಮ್ಮ ದೇವಾಂಗ ಸಮಾಜದ ಒಂದು ಗುಂಪಿನ ಪಿ.ಎನ್.ಶಿವಕುಮಾರ್. ಸಿ.ಎಂ.ಪರಮೇಶ್ವರಯ್ಯ (ಚಿಂತು), ಸುರೇಶ್, ಪಿ.ವಿ. ಲಕ್ಷ್ಮಣ ಹಾಗೂ ಇನ್ನಿತರ ಮುಖಂಡರ ಒಂದು ಗುಂಪು ಸೇರಿ 4/02/2026 ರಿಂದ 13/02/2026 ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬವನ್ನು ಆಚರಿಸಲು ಮುಂದಾಗಿದ್ದು ಇವರು ನಮ್ಮ ಕುಲದ ಶಿಷ್ಟಚಾರವನ್ನು ಪಾಲನೆ ಮಾಡದೆ 16 ಬೀದಿಗಳ ಎಜೆಂಟ್‌ ರುಗಳು, ಕುಲಸ್ಥರು, ಶೆಟ್ಟಿಗಾರರ ಅನುಮತಿ ಇಲ್ಲದೆ, ವಿಚಾರಗಳನ್ನು ಪಾಲನೆ ಮಾಡದೆ ಹಬ್ಬ ಎಲ್ಲಾ ಯಜಮಾನರುಗಳು ಮತ್ತು ಮುಖಂಡರುಗಳು ಸೇರಿ ಹಬ್ಬದ ಬಗ್ಗೆ ಚರ್ಚೆ ನಡೆಸಿ ಹಬ್ಬ ಆಚರಿಸಲು ತೀರ್ಮಾನ ಕೈಗೊಳ್ಳಬೇಕಾಗಿತ್ತು.

ಆದರೆ ಶ್ರೀರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಸೇವಾ ಸಮಿತಿ ಹೆಸರಿನಲ್ಲಿ ಕತ್ತಿ ಹಬ್ಬ ಮಾಡುತ್ತೇನೆಂದು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಮೊದಲು ಮಹಾಸಭೆ ಹಬ್ಬದ ಬಗ್ಗೆ ಚರ್ಚೆಯಾಗಿ ತೀರ್ಮಾನವಾದ ನಂತರ ಪಟ್ಟಣದ ಎಲ್ಲಾ ವರ್ಗದ ಯಜಮಾನರುಗಳು ಮತ್ತು ಮುಖಂಡರುಗಳ ಜೊತೆ ಹಬ್ಬದ ಬಗ್ಗೆ ಚರ್ಚೆ ನಡೆಸಿ ಹಬ್ಬ ಮಾಡಬೇಕೆಂದು ತೀರ್ಮಾನವಾದ ನಂತರ ನಮ್ಮ ಕುಲದಲ್ಲಿ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡಬೇಕು. ಇವೆಲ್ಲವನ್ನು ದಿಕ್ಕರಿಸಿ ಕತ್ತಿ ಹಬ್ಬ ಮಾಡಲು ಒಪ್ಪಿಗೆ ನೀಡಲ್ಲ. 2027ಕ್ಕೆ ಕತ್ತಿ ಹಬ್ಬವನ್ನು ಮಾಡಲು ನಾವು ಚಿಂತೆ ಮಾಡಿದ್ದೇವೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ ಶಂಕರ್ ಮಾತನಾಡಿ ಕತ್ತಿ ಹಬ್ಬ ಮಾಡಬೇಕಾದರೆ ಕುಲದ ಗುರುಗಳಾದ ಮಹೇಶ್ ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಇವರ ಅಪ್ಪಣೆ ಪಡೆದುಕೊಂಡೇ ಹಬ್ಬದ ಸಿದ್ಧತೆ ಮಾಡಬೇಕು, 11 ವರ್ಷ ತುಂಬಿ 12ನೇ ವರ್ಷದ ಬಳಿಕ ಕತ್ತಿ ಹಬ್ಬ ಮಾಡಲು ಪದ್ಧತಿ ಇದೆ. ಇವೆಲ್ಲವನ್ನು ದಿಕ್ಕರಿಸಿ ಕತ್ತಿ ಹಬ್ಬ ಮಾಡಲು ಹೊರಟಿರುವುದು ಸರಿಯಲ್ಲ ಒಮ್ಮತದ ತೀರ್ಮಾನ ಕೈಗೊಂಡು 2027ಕ್ಕೆ ಕತ್ತಿ ಹಬ್ಬ ಮಾಡೋಣ ಎಂದು ಸಲಹೆ ನೀಡಿದರು.

ದೇವಾಂಗ ಮಹಾಸಭಾ ಶ್ರೀ ಕಾಶಿವಿಶ್ವನಾಥ ಗುಡಿ ಬೀದಿ ಶ್ರೀನಿವಾಸ್ ಶಾಸ್ತ್ರಿ ಮಾತನಾಡಿ ದೇವಾಂಗ ಸಮುದಾಯದ ಆಚಾರ ವಿಚಾರವನ್ನು ಪಾಲನೆ ಮಾಡದೆ ಒಂದು ಗುಂಪು ಕತ್ತಿ ಹಬ್ಬ ಮಾಡುತ್ತೇವೆಂದು ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಸೇವಾ ಸಮಿತಿ ಹೆಸರಿನಲ್ಲಿ ಹಬ್ಬ ಮಾಡುತ್ತೇವೆಂದು ದೇಣಿಗೆ ಸಂಗ್ರಹಿಸಲು ಹೊರಟಿದ್ದಾರೆ. ಈ ಸಮಿತಿಗೆ ದೇಣಿಗೆ ನೀಡಬಾರದು ಮತ್ತು ಸಹಕಾರವನ್ನು ನೀಡಬಾರದೆಂದು ಸಮುದಾಯದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇರುವ ಭಕ್ತರಲ್ಲಿ ಮನವಿ ಮಾಡಿದರು.

ಶೆಟ್ಟರ್‌ಗಳಾದ ಎಂ.ಮಹೇಶ್, ಕೆ.ಸಿ. ವೀರಭದ್ರಸ್ವಾಮಿ, ಜಿ.ಕನಕರಾಜು, ಜಿ.ಸುರೇಶ್, ಸಮುದಾಯದ ಹಿರಿಯ ಮುಖಂಡ ನಿರಂಜನ್, ಅರುಣಚಲೇಶ್ವರ ಟ್ರಸ್ಟ್‌ನ ಅಧ್ಯಕ್ಷ ಸುಂದರ್, ಶೆಟ್ಟಿಗಾರರು ಮತ್ತು ಕುಲಸ್ಥರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.