ರಮಾಬಾಯಿ ತ್ಯಾಗದ ಸಂಕೇತ: ಎಸ್ ಪ್ರಕಾಶ್ ಪ್ರಿಯಾದರ್ಶನ್

Spread the love

ಮೈಸೂರು: ಮಹಾ‌ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದ ಯಶಸ್ಸಿನ ಹಿಂದೆ ರಮಾಬಾಯಿಯರ ತ್ಯಾಗ ದೊಡ್ಡದಿದೆ ಎಂದು‌ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ಮೈಸೂರಿನ ಅರವಿಂದ ನಗರದ
ಜೆ ಎಸ್ ಎಸ್ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್
ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ರಮಾಬಾಯಿ ಅಂಬೇಡ್ಕರ್ ಅವರ 127 ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಮಾಬಾಯಿ ಅವರು ಒಬ್ಬ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹಿತೆಷಿಯಾಗಿ ಅಂಬೇಡ್ಕರ್ ಜೀವನದಲ್ಲಿ ಸಾಥ್ ನೀಡಿದ್ದಾರೆ.ಇವರ ತ್ಯಾಗದ ಪ್ರತೀಕವಾಗಿಯೇ ಡಾ. ಬಾಬಾಸಾಹೇಬರು ವಿಶ್ವ ಚೇತನವಾಗಿ ಹೊರಹೊಮ್ಮಿ ಇಡಿ ಜಗತ್ತಿನಲ್ಲಿಯೇ ಪ್ರಸಿದ್ದಿಯನ್ನು ಪಡೆದರು ಎಂದು ಬಣ್ಣಿಸಿದರು.

ರಮಾಬಾಯಿ ಬಾಬಾಸಾಹೇಬರ ಪ್ರತಿ ಕ್ಷಣದಲ್ಲೂ ಆಸರೆಯಾಗಿ ನಿಂತು ಆತ್ಮಸ್ಥೆರ್ಯವನ್ನು ತುಂಬಿದರು.ಆ ತಾಯಿ ಸ್ತ್ರೀ ಕುಲಕ್ಕೆ ಆದರ್ಶವಾಗಿದೆ. ಒಬ್ಬ ಪುರುಷ ಯಶಸ್ವಿಯಾಗಬೇಕಾದರೆ ಒಬ್ಬ ಸ್ತ್ರೀ ಪಾತ್ರ ಅತ್ಯವಶ್ಯಕವಾಗಿದೆ ಸ್ತ್ರೀ ಇಲ್ಲದಿದ್ದರೆ ಈ ಭೂಮಿಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಎಸ್ ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು.

ಈ ವೇಳೆ ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಸುಬ್ರಮಣಿ,ವೀರಭದ್ರ ಸ್ವಾಮಿ, ಛಾಯಾ,ಯಶ್ವಂತ್ ಕುಮಾರ್,
ಮಹದೇವ್, ಮಹೇಶ್, ಮಹದೇವಸ್ವಾಮಿ,
ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.