ಮೈಸೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆಯನ್ನು
ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಜೀವದಾರರ ರಕ್ತನದಿ ಕೇಂದ್ರಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನ್ಯೂ ಸಯ್ಯೋಜಿ ರಾವ್ ರಸ್ತೆ
ಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ 30ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಡಾ. ಪುನೀತ್ ರಾಜಕುಮಾರ್ ರವರನ್ನು ಸ್ಮರಿಸಿದರು.
ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡರು,ನಮ್ಮ ಬದುಕು ಬೆಳಕಾಗಬೇಕು ಬದಕು ಬಯಲಾಗ ಬೇಕು ಇದುವೆ ಜೀವನ ಎಂದು ಹೇಳಿದರು.
ನೂರು ವರ್ಷ ಬದುಕಿದರೆ ಅದು ಸಾರ್ಥಕವಾಗಲಾರದು, ಯಾರಿಗಾಗಿ ನಾನು ಬದುಕಿದ್ದೇನೆ,ಯಾವ ಸೇವೆಯನ್ನ ಮಾಡಿದ್ದೇನೆ ಎಂಬ ನಿದರ್ಶನದ ಮೇಲೆ ಬದುಕು ಸಾರ್ಥಕವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ನಮ್ಮ ಬದುಕು ಪ್ರದರ್ಶನವಾಗಬಾರದು, ನಮ್ಮ ಬದುಕು ನಿರ್ದರ್ಶನವಾಗಬೇಕು ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಅಪ್ಪುಎಂದು ನಾರಾಯಾಣಗೌಡ ಬಣ್ಣಿಸಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಮಾತನಾಡಿ,ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ನಿಂತಿದ್ದರು. ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತ ರಕ್ಕೆ ಬೆಳೆದು ನಿಂತರು ಎಂದು ಸ್ಮರಿಸಿದರು.
ಜೀವದರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹರಿಯ ಪರಿಹಾರಿಯ, ಸದಾಶಿವ್, ನಾಗಮಣಿ,ದರ್ಶನ್, ನವೀನ್, ಮಮತಾ ಮತ್ತಿತರರು ಹಾಜರಿದ್ದರು.

