ಸಾವರ್ಕರ್‌ ಬಗ್ಗೆ ರಾಹುಲ್ ಟೀಕೆ:ಕೋರ್ಟ್ ತೀರ್ಪು ಸ್ವಾಗತಿಸಿದ ವೀರ ಸಾವರ್ಕರ್ ಯುವ ಬಳಗ

Spread the love

ಮೈಸೂರು: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂದಿ ಟೀಕಿಸಿರುವ ಬಗ್ಗೆ ನ್ಯಾಯಾಲಯದ ತೀರ್ಪನ್ನು ವೀರ ಸಾವರ್ಕರ್ ಯುವ ಬಳಗ ಸ್ವಾಗತಿಸಿದೆ.

ರಾಹುಲ್ ಗಾಂಧಿಯವರು ಕೂಡಲೇ ದೇಶಭಕ್ತರ ಕ್ಷಮೆ ಯಾಚಿಸಬೇಕೆಂದು ವೀರ ಸಾವರ್ಕರ್ ಯುವ ಬಳಗ ಒತ್ತಾಯಿಸಿದೆ.

ಸಾವರ್ಕರ್ ಜೈಲಿನಿಂದ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣಾ ಪತ್ರದಲ್ಲಿ ಯುವರ್ ಫೈತ್ ಫುಲ್ ಸರ್ವೆಂಟ್ ಎಂಬ ಅಭಿವಂದನಾ ಪದ ಬಳಸಿದ್ದರು ಮತ್ತು ಪಿಂಚಣಿ ಪಡೆದಿದ್ದರು ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಕ್ಕಾಗಿ ತಮ್ಮ ಜೀವನದ ಬಹು ಪಾಲು ಜೈಲಿನಲ್ಲಿ ಸವೆಸಿದ್ದ ವೀರ ಸಾವರ್ಕರ್ ಒಬ್ಬ ಹೇಡಿ ಎಂದು ಟೀಕಿಸಿದ್ದರು.

ಈ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು, ಮೈಸೂರಿನಲ್ಲಿ ವೀರ ಸಾವರ್ಕರ್ ಬಳಗದಿಂದ ಎರಡು ಬಾರಿ ಪ್ರತಿಭಟನೆ ನಡೆಸಿ ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಅಗ್ರಹಿಸಲಾಗಿತ್ತು.

ಆದರೂ ರಾಹುಲ್ ಗಾಂಧಿ ಟೀಕಿಸುವುದನ್ನು ಮುಂದುವರೆಸಿದ್ದರು. ತಮ್ಮ ನಾಯಕನ ಟೀಕೆಯಿಂದ ಪ್ರೇರಣೆಗೊಂಡ ಅವರ ಅನುಯಾಯಿಗಳು ಹಾಗೂ ಕಾಂಗ್ರೆಸಿನ ಕೆಲ ಮುಖಂಡರು ಅದನ್ನೇ ಮುಂದುವರೆಸಿದರು.

ಕೆಲ ಮೂಲಭೂತವಾದಿ ಮತಾಂಧ ಅನ್ಯ ಮತೀಯರು ಸಹ ಸಾಮಾಜಿಕ ಜಾಲ ತಾಣದಲ್ಲಿ ಸಾವರ್ಕರ್ ಬಗ್ಗೆ ವ್ಯಂಗ್ಯಚಿತ್ರಗಳನ್ನು ಬಳಸಿ ಹೇಡಿ ಮುಂತಾದ ಪದ ಬಳಕೆ ಮಾಡಿ ಟೀಕಿಸಿದ್ದಾರೆ.

ಈಗ ಸರ್ವೋಚ್ಚ ನ್ಯಾಯಾಲಯ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಸ್ಪಷ್ಟವಾಗಿ ತೀರ್ಪನ್ನು ನೀಡಿದ್ದಾರೆ.

ಮಹಾತ್ಮಾ ಗಾಂಧಿಯವರು ಕೂಡ ಬ್ರಿಟಿಷ್ ವೈಸರಾಯ್ ಗೆ ಬರೆದ ಪತ್ರಗಳಲ್ಲಿ ಯುವರ್ ಫೈತ್ ಫುಲ್ ಸರ್ವೆಂಟ್ ಎಂಬ ಅಭಿವಂದನಾ ಪದವನ್ನು ಬಳಸುತ್ತಿದ್ದರು, ಅವರನ್ನೂ ರಾಹುಲ್ ಗಾಂಧಿ ಟೀಕಿಸುತ್ತಾರಾ ಎಂದು ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ
ರಾಕೇಶ್ ಭಟ್ ಪ್ರಶ್ನಿಸಿದ್ದಾರೆ‌.

ಅಂದಿನ ಕಾಲದಲ್ಲಿ ಬ್ರಿಟಿಷರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಈ ರೀತಿ ಅಭಿನಂದನಾ ಪದ ಬಳಸುವುದು ಸಾಮಾನ್ಯವಾಗಿತ್ತು, ಕಲ್ಕತ್ತಾ ನ್ಯಾಯಾಧೀಶರು ಸಹ ಸರ್ವೋಚ್ಛ ನ್ಯಾಯಾಧೀಶರನ್ನು ಇದೇ ರೀತಿ ಸಂಭೋದಿಸುತ್ತಿದ್ದರು ಎಂಬುದನ್ನು ಸಹ ನ್ಯಾಯಾಲಯ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಕಾಂಗ್ರೆಸ್ ಮುಖಂಡರೂ ಆದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ.

ಜೊತೆಗೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗಲೇ ಸಾವರ್ಕರ್ ರವರನ್ನು ಹೊಗಳಿ ಪತ್ರ ಬರೆದಿದ್ದನ್ನು ರಾಹುಲ್ ಗಾಂಧಿಯವರಿಗೆ ಜ್ಞಾಪಿಸಿ,
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಸಹ ತಿಳಿವಳಿಕೆ ನೀಡಿದೆ.

ದೇಶದದ್ಯಾಂತ ಸಾವರ್ಕರ್ ಹಾಗೂ ಅವರ ಸಹೋದರರ ತ್ಯಾಗದ ಬಗ್ಗೆ ಹೆಮ್ಮೆ ಪಟ್ಟು ಪ್ರೀತಿಸುವ ಜನರಿದ್ದಾರೆ. ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂ ಪ್ರೆರಣೆಯಿಂದ (suo moto) ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ತೀರ್ಪನ್ನು ವೀರ ಸಾವರ್ಕರ್ ಯುವ ಬಳಗ ಸ್ವಾಗತಿಸಿದೆ, ಜೊತೆಗೆ ರಾಹುಲ್ ಗಾಂಧಿಯನ್ನು ನ್ಯಾಯಾಲಯಕ್ಕೆ ಕರೆದು ಕ್ಷಮೆ ಕೇಳಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಯಾರೂ ತುಚ್ಚವಾಗಿ ಮಾತನಾಡಬಾರದು. ಅದರಲ್ಲಿಯೂ ರಾಜಕೀಯ ಕಾರಣಕ್ಕೆ ಒಂದು ವರ್ಗವನ್ನು ಓಲೈಸಲು ಇಂತಹ ಕೆಳ ಮಟ್ಟಕ್ಕೆ ಇಳಿಯಬಾರದು ಎಂದು ರಾಕೇಶ್ ಭಟ್ ಹೇಳಿದ್ದಾರೆ.

ಕಳೆದ ವರ್ಷ ಕೆಳ ನ್ಯಾಯಾಲಯದಿಂದಲೂ ರಾಹುಲ್ ಗಾಂಧಿ ಅರ್ಜಿ ತಿರಸ್ಕಾರವಾಗಿತ್ತು. ಹೀಗಾಗಿ ಈಗ ಸರ್ವೋಚ್ಚ ನ್ಯಾಯಾಲಯ ಹೇಳಿರುವುದನ್ನು ದೇಶದ ಎಲ್ಲಾ ನಾಯಕರು, ಅದರಲ್ಲಿಯೂ ಕಾಂಗ್ರೆಸ್ ನಾಯಕರು ಗಮನಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈಗಲಾದರೂ ರಾಹುಲ್ ಗಾಂಧಿ ದೇಶಭಕ್ತರ ಕ್ಷಮೆಯಾಚಿಸಲಿ ಎಂದು ಅಗ್ರಹಿಸಿದ್ದಾರೆ.

ನೆಹರು ಅವರನ್ನು ಜೈಲಿಗೆ ಹಾಕಿದಾಗ ಅವರ ತಂದೆ ಮೋತಿಲಾಲ್ ನೆಹರು ಸಹ ಕ್ಷಮಾಪಣೆ ಪತ್ರವನ್ನು ವೈಸಾರಾಯ್ ಬಳಿ ಕೊಂಡೊಯ್ದಿದ್ದರು, ಅದು ಜೈಲಿಗೆ ಹಾಕಿದ ಕೇವಲ ನಾಲ್ಕೇ ದಿನಕ್ಕೆ ಎಂಬುದನ್ನು ಸಾವರ್ಕರ್ ಟೀಕಿಸುವ ಕಾಂಗ್ರೆಸ್ ನಾಯಕರು ನೆನೆಸಿಕೊಳ್ಳಬೇಕು ಎಂದು‌ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ
ರಾಕೇಶ್ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.