ಮೈಸೂರು: ಕೇವಕ ಮೂರನೆ ತರಗತಿಯಲ್ಲೇ ಈ ಬಾಲಕ ಬಹಳಷ್ಟು ಸಾಧನೆ ಮಾಡಿ ಸಾಂಸ್ಕೃತಿಕ ನಗರಿಯ ಮನೆಮಾತಾಗಿದ್ದಾನೆ.ಈತನೆ ಪೃಥು ಪಿ ಅದ್ವೈತ್.

ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಪೃಥು ಪಿ ಅದ್ವೈತ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.ಈ ಬಾಲಕ ಈಗಾಗಲೇ ಹಕವಾರು ಪ್ರಶಸ್ತಿಗಳಿಗೆ ಭಾಜನರಾಗಿರುವುದು ವಿಶೇಷ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು, ಶ್ರೀ ಸುಜ್ಞಾನ ವಿದ್ಯಾಪೀಠ,ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೃಥು ಪಿ ಅದ್ವೈತ್ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೃಥು ಪಿ ಅದ್ವೈತ್ ಇತ್ತೀಚೆಗೆ 150 ಶ್ಲೋಕಗಳನ್ನು 30 ನಿಮಿಷದಲ್ಲಿ ಪಠಿಸಿ ಏಕಕಾಲದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದರು ಅವರ ಸಾಧನೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೃಥು ನನ್ನ ಈ ಪ್ರಯತ್ನ ಗುರುತಿಸಿ ಆದರ್ಶ ಬಾಲ ಪ್ರತಿಭಾ ರತ್ನ, ಬಾಲ ಸ್ತೋತ್ರ ಕಲಾ ರತ್ನ, ಶ್ಲೋಕ ಸ್ಕಾಲರ್, ರೈಸಿಂಗ್ ಸ್ಟಾರ್ ಆಫ್ ಕರ್ನಾಟಕ ಹಾಗೂ ಬಾಲ ಕರುನಾಡ ರತ್ನ ಪ್ರಶಸ್ತಿಗಳು ಸಂದಿವೆ ಇವುಗಳ ಜತೆಗೆ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನನ್ನ ಜವಾಬ್ದಾರಿ ಯನ್ನು ಮತ್ತಷ್ಟು ಹೆಚ್ಚಿಸಿದೆ,ನನ್ನ ಪ್ರಯತ್ನ ಗುರುತಿಸಿ ಅಭಿನಂದಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ಧನ್ಯವಾದಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಹರ್ಷಿ ಸಿದ್ದಾರ್ಥ ಸ್ವಾಮಿಜಿ , ರಾಜು ಮೋರೆ, ಶರಣಪ್ಪ ಕಲ್ಲೂರು , ನಾಗರಾಜ್ ತಂಬ್ರಡಗಿ, ಸಾಹಿತ್ಯ ಪರಿಷತ್ ಸಲಹೆಗಾರರಾದ ಅಮೀನ ಖಾಲಿ ಖಾನ್ ಪೋಷಕರಾದ ಪುನೀತ್ ಜಿ, ಪೂಜಾ ಎನ್, ಕೆ.ಆರ್. ಗಣೇಶ್, ಸರಸ್ವತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
