ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ ಕೇಂದ್ರ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ತುಘಲಕ್ ತೆರಿಗೆ ದರೋಡೆ ಅಭಿಯಾನ ಇಂದು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು.

ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹಾಗೂ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ನೇತೃತ್ವದಲ್ಲಿ ನಡೆದ ಅಭಿಯಾನವು ಬ್ರಿಗೇಡ್ ರಸ್ತೆ, ನೀಲಸಂದ್ರ, ವನ್ನಾರ್ ಪೇಟೆ, ಎಲ್.ಅರ್.ನಗರ, ದೊಮ್ಮಲೂರು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಅಭಿಯಾನವನ್ನು ನಡೆಸಲಾಯಿತು.
ಗ್ಯಾಸ್ ಸಿಲಿಂಡರುಗಳು,ಡಿಕೆಶಿ ಟ್ಯಾಕ್ಸ್,ಸಿದ್ದಣ್ಣ ಟ್ಯಾಕ್ಸ್ ಮುಂತಾದ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಕಾರ್ಯ ಕಾರ್ಯಕರ್ತರು ಪ್ರದರ್ಶಿಸಿದರು.

ಮತ್ತೆ ಕೆಲವರು ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯಹಾಗೂ ನರೇಂದ್ರ ಮೋದಿ ಅವರುಗಳ ಮುಖವಾಡ ಧರಿಸಿ ಅಣಕು ಪ್ರದರ್ಶನ ಮಾಡಿದರು.

ಕ್ಷೇತ್ರದ ಸಾವಿರಾರು ಕಾರ್ಯಕರ್ತರುಗಳಿಗೆ ಬೆಲೆ ಏರಿಕೆ ಕರಪತ್ರವನ್ನು ನೀಡುವ ಮೂಲಕ ಪಕ್ಷದ ಜನಾಂದೋಲನದಲ್ಲಿ ಸಕ್ರಿಯಗೊಳ್ಳಬೇಕೆಂದು ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮನವಿ ಮಾಡಿದರು.
ಜನಸಾಮಾನ್ಯರ ಧ್ವನಿಯಾಗಿ ಆಮ್ ಆದ್ಮಿ ಪಕ್ಷ ಎಂದಿಗೂ ಹೋರಾಡುತ್ತದೆ. ನೀಚ ಸರ್ಕಾರಗಳು ಬೆಲೆ ಇಳಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅನಿಲ್ ನಾಚಪ್ಪ ತಿಳಿಸಿದರು.

ಅಭಿಯಾನದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸರಾವ್, ಶಿವಕುಮಾರ್ ನಾಯ್ಡು, ಸರವಣ ಸೇರಿದಂತೆ ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
