ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಪ್ರಜ್ಞಾವಂತರ ವೇದಿಕೆಯಿಂದ ಸಂವಿಧಾನ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಶ್ರೀರಂಗಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಪೇಟೆಬೀದಿಯ ಮೂಲಕವಾಗಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಯುವ ಅಂಬೇಡ್ಕರ್ ಅವರ ಪುತ್ಥಳಿ ತನಕ ಮೆರವಣಿಗೆ ಮಾಡಲಾಯಿತು.
ನವೆಂಬರ್ 26 ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ದಿನ. ಬಾಬಾ ಸಾಹೇಬ ಸಾಹೇಬ್ ಅಂಬೇಡ್ಕರ್ ರವರು ಭಾರತದ ಸಮಸ್ತ ನಾಗರಿಕರಿಗೂ ಸಮಾನತೆಯ ಹಕ್ಕನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ.
ದೀನ, ದುರ್ಬಲರಿಗೆ ಶೋಷಿತ ದಮನಿತ ವರ್ಗದವರಿಗೆ ಮೇಲು ಕೀಳು ಎಂಬ ಮನೋಭಾವನೆಯನ್ನು ಬಿಟ್ಟು ನಾವೆಲ್ಲ ಒಂದು, ನಾವು ಜಾತಿ ಧರ್ಮ ಬೇದಭಾವವನ್ನೆಲ್ಲ ಮರೆತು ನಾವು ಭಾರತೀಯರು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ನೀಡಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗುವ ಆಶಯವಿದೆ ಎಂದು ತೋರಿಸಿಕೊಟ್ಟ ಮಹಾನ್ ನಾಯಕನಿಗೆ ಸಂವಿಧಾನ ರಚನೆಯ ದಿನದಂದು ಶ್ರೀರಂಗಪಟ್ಟಣದ ವಕೀಲರಾದ ಲಾಯರ್ ವೆಂಕಟೇಶ್, ಓಂ ಶ್ರೀನಿಕೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಆಶಾಲತಾ ಅವರು ಹಾಗೂ ಪ್ರಜ್ಞಾವಂತ ವೇದಿಕೆಯ ಸದಸ್ಯರುಗಳು ನಮನ ಸಲ್ಲಿಸಿ ಸ್ಮರಿಸಿದರು.