ಮೈಸೂರು: ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಜ.29ರಂದು ಪಂಚಗರುಡೋತ್ಸವ ನಡೆಯಲಿದೆ.
ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ನಾರಯಣ ರಾಮಾನುಜ ಜೀಯರ್ ಅವರ ಮಾರ್ಗದರ್ಶನದಲ್ಲಿ ಪಂಚಗರುಡೋತ್ಸವ ನಡೆಯಲಿದ್ದು, ಕೆ.ಅರ್.ಕ್ಷೇತ್ರದ ಶಾಸಕರೂ ಪಂಚಗರುಡೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ ಅವರು ಪೋಸ್ಟರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಟಿ.ಎಸ.ಶ್ರೀ ವತ್ಸ ಅವರು ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಎರಡನೆ ಬಾರಿಗೆ ಪಂಚಗರೋಡತ್ಸವ ಸೇವೆಯನ್ನು ಪ್ರಾರಂಭಮಾಡಲಾಗಿದೆ ಎಂದು ಹೇಳಿದರು.
ಶಾಸ್ತ್ರಗಳಲ್ಲಿ ಉಲ್ಲೇಖದಂತೆ ಭಕ್ತಿ ಭಾವದಿಂದ ಸ್ವಾಮಿ ನಿಷ್ಠೆ ಇರುವ ಗರುಡನ ಮೇಲೆ ಬರುವ ಸ್ವಾಮಿಯ ದರ್ಶನ ಮಾಡುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಆರೋಗ್ಯ ಸುಧಾರಿಸುತ್ತದೆ ಸಜ್ಜನರ ಸಹವಾಸ ಸದಾ ಇರುತ್ತದೆ ಲೋಕ ಕಲ್ಯಾಣವಾಗಿ ಸಕಲ ಸೌಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು.
ಪಂಚ ಗರುಡೋತ್ಸವ ಸೇವೆಯು ಜ. 29ರ ಸಂಜೆ 5 ಗಂಟೆ ಪ್ರಾರಂಭವಾಗಿ ವೇದಿಕೆ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪಂಚಗರುಡೋತ್ಸವ ಮಾಡಲಾಗುವುದು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಬ್ರಹ ತಂತ್ರ ಪರಕಾಲ ಮಠದ ಸ್ವಾಮಿಜೀ,ಯತಿರಾಜ ನಾರಯಣ ಜೀ ಸವರು, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,ಭಾಷ್ಯಂ ಸ್ವಾಮೀ ಜೀ ಉಪಸ್ಥಿತರಿ ರುವರು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಯೋಗಾ ನರಸಿಂಹನ್,ವೀರ ರಾಘವನ್,ಪ್ರದೀಪ್, ನಾಗಲಕ್ಷಿ,
ಜಾನಕಿ ಶೇಷಾದ್ರಿ,ರಾಧಿಕಾ,ರಾಮಸ್ವಾಮಿ ಅಯ್ಯಂಗಾರ್, ಶೇಷಾದ್ರಿ ಅಯ್ಯಂಗಾರ್,ಜಗದೀಶ್, ಪ್ರಸನ್ನ, ಶಾಂತರಾಮ್,ಆನಂದ್,ರಾಜಗೋಪಾಲ್ ಮುಂತಾದವರು ಹಾಜದ್ದರು.