ಇಂದು ಕೂಡ ದರ್ಶನ್​ಗೆ ಸಿಗಲಿಲ್ಲ ಬೇಲ್

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು,
ಶನಿವಾರ ಕೋರ್ಟ್​​ನಲ್ಲಿ ಬೇಲ್ ಅರ್ಜಿ ವಿಚಾರಣೆ ನಡೆಯಿತು.

ಆದರೆ ಸತತ ನಾಲ್ಕು ಗಂಟೆಗಳ ಕಾಲ ಹಿರಿಯ ವಕೀಲ ಸಿ.ವಿ ನಾಗೇಶ್​ ವಾದ ಮಂಡಿಸಿದರೂ ಕೂಡಾ ನಟ ದರ್ಶನ್​ಗೆ ಬೇಲ್ ಸಿಗಲಿಲ್ಲ.

ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು, ತನಿಖೆಯಲ್ಲಿ ಪೊಲೀಸರು ಮಾಡಿದ ತಪ್ಪುಗಳನ್ನು ಪ್ರಶ್ನೆ ಮಾಡಿದ್ದು, ತನಿಖೆ ತಡವಾಗಿದ್ದು ಯಾಕೆ, ದರ್ಶನ್ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ವಾದ ಮಂಡಿಸಿದರು.ಜತೆಗೆ ಕೇಸ್​ ತನಿಖೆಯ
ತಪ್ಪುಗಳ ಪಟ್ಟಿಯನ್ನು ಕೋರ್ಟ್​​ಗೆ ನೀಡಿದರು.

ಸಿ.ವಿ. ನಾಗೇಶ್ ಅವರು ವಾದ ಮುಗಿಸುತ್ತಿದ್ದಂತೆ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಅ.8ಕ್ಕೆ ಮುಂದೂಡಿದರು.

ಇಂದು ಬೇಲ್ ಸಿಗಬಹುದೆಂದು ಕಾಯುತ್ತಿದ್ದ ದರ್ಶನ್​ಗೆ ನಿರಾಸೆ ಆಗಿದೆ,ಜೈಲಿನಲ್ಲೇ ಇರಬೇಕಿದೆ. ಇನ್ನು ಪವಿತ್ರಾ ಗೌಡಗೂ ಬೇಲ್ ಸಿಕ್ಕಿಲ್ಲ. ಸಿಟಿ ಸಿವಿಲ್ ಕೋರ್ಟ್, ಪವಿತ್ರಾಗೌಡ ಜಾಮೀನು ಅರ್ಜಿಯನ್ನು ಸಹ ಅಕ್ಟೋಬರ್ 8 ಕ್ಕೆ ಮುಂದೂಡಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ ಆಗಿದ್ದು,ಅಂದು ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ಪ್ರತಿವಾದ ಮಂಡಿಸಲಿದ್ದಾರೆ.