ಮೈಸೂರು: ಮೈಸೂರಿನ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಜಾತ್ಯಾತೀತ ಜನತಾದಳದ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಮೈಸೂರಿನ ಹೊಸ ಹುಂಡಿ ರಿಂಗ್ ರಸ್ತೆಯಲ್ಲಿ ಜೆಡಿಎಸ್ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮವನ್ನು ಅಧ್ಯಕ್ಷ ಪ್ರದೀಪ್ ಕೃಷ್ಣೇಗೌಡ ನೇತೃತ್ವದಲ್ಲಿ ಆಚರಿಸಲಾಯಿತು.
ವರುಣ ಜೆಡಿಎಸ್ ಅಧ್ಯಕ್ಷ ಬಾಲಕೃಷ್ಣ, ಎಂ.ಚಂದ್ರಶೇಖರ, ಪ್ರಸನ್ನ, ನಾಗರಾಜು ಹಾಗೂ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಎಲ್ಲಾ ಸೇರಿ ಸಿಹಿ ಹಂಚಿ ಸಂಭ್ರಮಿಸಿದರು.
