ಮೈಸೂರು: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ದೇವರಾಜ ಠಾಣೆ ಎಸಿಪಿ ಸ್ಕ್ವಾಡ್ ನ ಸಿಬ್ಬಂದಿ ಪ್ರದೀಪ್ ಎಂಬವರನ್ನು ಅಮಾನತುಪಡಿಸಲಾಗಿದೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರದೀಪ್ ನನ್ನು ಅಮಾನತುಪಡಿಸಿ
ಆದೇಶ ಹೊರಡಿಸಿದ್ದಾರೆ.
ಮಾದಕ ವಸ್ತುಗಳ ವಿರುದ್ದ ಸಮರ ಸಾರಿರುವ ಮೈಸೂರು ಪೊಲೀಸರ ಕಾರ್ಯಾಚರಣೆ ವೇಳೆ ಕೆಲವು ಮಾಹಿತಿಗಳು ತಿಳಿದಿದ್ದರೂ ಪ್ರದೀಪ್ ಮರೆಮಾಚಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಅಮಾನತು ಕ್ರಮ ಕೈಗೊಳ್ಳಲಾಗಿದೆ.