ನೀಮಲೋಬೋ ಅವರ ಅಭಿಸಾರಿಕೆ, ಮಾತು ಮುಗಿದ ಮೇಲು ಪುಸ್ತಕ ಬಿಡುಗಡೆ

Spread the love

ಮಂಗಳೂರು: ಉಡುಪಿ ಜಿಲ್ಲೆಯ ಶಂಕರಪುರದ ನೀಮಲೋಬೋ ಅವರ ಅಭಿಸಾರಿಕೆ ಮತ್ತು ಮಾತು ಮುಗಿದ ಮೇಲು ಪುಸ್ತಕ ಬಿಡುಗಡೆ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನೆರವೇರಿತು.

ಈ ಕಾರ್ಯಕ್ರಮ ಮಂಗಳೂರಿನ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಥಾಬಿಂದು ಪ್ರಕಾಶನ ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳು ಅದ್ದೂರಿಯಿಂದ ಬಿಡುಗಡೆಯಾಯಿತು.

ನೀಮಲೋಬೋ ಅವರು ಪ್ರಸ್ತುತ “ಒಂದು ಹೆಜ್ಜೆ ರಕ್ತದಾನಿ ಬಳಗ” ಉಡುಪಿ ಜಿಲ್ಲೆಯ ಅಧ್ಯಕ್ಷರು.ಹಾಗೂ ಸರ್ವಕಲಾ ಸೇವಾ ಟ್ರಸ್ಟ್ ಶಂಕರಪುರ ಇದರ ಅಧ್ಯಕ್ಷರು.

ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಅಲ್ಲದೆ ಸಮಾಜ ಸೇವಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮವಾದ ಪ್ರತಿಲಿಪಿ ಎಂಬ ಜಾಲತಾಣದಲ್ಲಿ ವಿವಿಧ ಲೇಖನಗಳನ್ನು ಬರೆದು ಹದಿನಾರು ಸಾವಿರಕ್ಕಿಂತಲೂ ಅಧಿಕ ವಾಚಕರಿಂದ ಪ್ರಶಂಸೆ ಪಡೆದಿದ್ದಾರೆ.

ಅವರ ಪತಿ ಡಾ. ಜೋಸೆಫ್ ಲೋಬೊ ಮತ್ತು ಮಗಳು ಜನಿಷಾ ಅವರೊಂದಿಗೆ ಉಡುಪಿ ಜಿಲ್ಲೆಯ ಶಂಕರ್ ಪುರದಲ್ಲಿ ವಾಸಿಸುತ್ತಿದ್ದಾರೆ.