ಮೈಸೂರು: ಮೈಸೂರಿನ ನಜರ್ಬಾದ್
ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ನಲ್ಲಿ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕ್ಷೇತ್ರ ತಾಳವಾಡಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ ಹಾಗೂ ರೇಣುಕಾ ಎಲ್ಲಮ್ಮ ದೇವಿಯ ಗದ್ದಿಗೆ ಪೂಜೆ ಹಮ್ಮಿಕೊಳ್ಳಲಾಯಿತು.
ಶ್ರೀ ಕ್ಷೇತ್ರ ತಾಳವಾಡಿ ಕ್ಷೇತ್ರದ ಅರ್ಚಕರಾದ ಶಿವಮುತ್ತು ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು.
ವೇದವತಿ ಅವರ ನಿವಾಸದಲ್ಲಿ ಶ್ರಾವಣ ಶಿನಿವಾರದ ಪ್ರಯುಕ್ತ ಶ್ರೀ ಕ್ಷೇತ್ರ ತಾಳವಾಡಿ ಶ್ರೀ ಕರಿಯಣ್ಣ ಕೆಂಚಣ್ಣ ಸ್ವಾಮಿ ಹಾಗೂ ರೇಣುಕಾ ಎಲ್ಲಮ್ಮ ದೇವಿಯನ್ನು ಆಹ್ವಾನಿಸಿ ಗದ್ದಿಗೆ ಪೂಜೆ ನೆರವೇರಿಸಲಾಯಿತು.