ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬಹಳ ವಿಶೇಷತೆ ಇತ್ತು.
ಇದಕ್ಕೆ ಕಾರಣ 50 ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕಾಲೇಜಿಗೆ ಭೇಟಿ ನೀಡಿದ್ದು ಈ ವಿಶೇಷತೆಗೆ ಕಾರಣ.
1964-1965 ರಲ್ಲಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ಆ ವಿದ್ಯಾರ್ಥಿಗಳಿಗೆ 75 ವರ್ಷಗಳು ತುಂಬಿ ತುಂಬು ಜೀವನವನ್ನ ನಡೆಸುತ್ತಿದ್ದಾರೆ.
ಅವರುಗಳು ಇಂದು ಕಾಲೇಜಿಗೆ ಭೇಟಿ ನೀಡಿ ತಮ್ಮ ಐವತ್ತು ವರ್ಷಗಳ ಹಿಂದಿನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮೆಲುಕು ಹಾಕಿದರು.
ತಮಗೆ ಬೋದಿಸಿದ ಶಿಕ್ಷಕರಾದ ಕೃಷ್ಣ ಅಯ್ಯಂಗಾರ್ ಮತ್ತು ಪ್ರಭಾಕರ್, ದೈಹಿಕ ಶಿಕ್ಷಕರಾದ ರಾಮಯ್ಯ ಇವರನ್ನು ಜ್ಞಾಪಿಸಿಕೊಳ್ಳುತ್ತಾ ಇಂದು ನಾವು ಈ ಮಟ್ಟಕ್ಕೆ ತಲುಪಬೇಕಾದರೆ ಅವರೇ ಕಾರಣಕರ್ತರು ಎಂದು ಧನ್ಯತೆ ಮೆರೆದರು.
ಆ ಸಂದರ್ಭದ ಅನುಭವವನ್ನು ಕೆ.ಎನ್.ವಾಸುದೇವ ಶಾಸ್ತ್ರಿ, ಶ್ರೀಧರ ,ನರಸಿಂಹಮೂರ್ತಿ ,ಡಾ. ಎಸ್ ಸುಂದರೇಶ್, ಕುಮಾರಸ್ವಾಮಿ, ಶ್ಯಾಮ್ ಸುಂದರ ,ಸೊಮನಾರಾಯಣ್, ನಾಗರಾಜ್ ,ಆದಿಶೇಷ, ಕೃಷ್ಣಮೂರ್ತಿ, ಯತಿರಾಜ್ ,ಥಾಮಸ್ ಅವರುಗಳು ಇಂದು ಮತ್ತೆ 50 ವರುಷದ ಹಿಂದಿನ ನೆನಪು ಹಾಕಿದ್ದು ಶ್ಲಾಘನೀಯವಾದುದು.
ಕಾಲೇಜಿನ ಎಲ್ಲ ಉಪನ್ಯಾಸಕರಿಗೆ ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ನೀಡುವ ಮೂಲಕ ಅವರ ಮುಂದಿನ ವ್ಯಾಸಂಗ ಮುಂದಿನ ಜೀವನಕ್ಕೆ ಸಹಾಯಕವಾಗುವ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡಿ ಎಂದು ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ನಾಗರಾಜು ,ಮಾಲತಿ ಟಿ.ಕೆ ರವಿ, ಆದಿಲ್ ಹುಸೇನ್, ನಾಗರಾಜ ರೆಡ್ಡಿ ಮತ್ತಿತರರು ಹಾಜ ರಿದ್ದರು.