ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ:ಸಿ.ಆರ್ ದಿನೇಶ್

ನಂಜನಗೂಡು,ಮಾ.8: ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ ಎಂದು
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ತಿಳಿಸಿದರು.

ಯಾವ ಸಮಾಜದಲ್ಲಿ ಸ್ತ್ರೀ ಪುರುಷ ಎಂಬ ಸಮಾನತೆಯ ಭಾವನೆ ಇರುತ್ತದೆಯೋ ಆ ಸಮಾಜ ಅಭಿವೃದ್ಧಿ ಪಥದ ಕಡೆಗೆ ಹೋಗಲು ಸಾಧ್ಯ ಎಂದು ಅವರು ತಿಳಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರಾಚೀನ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ವಿವಿಧ ರೀತಿಯಲ್ಲಿ ಅಂತಸ್ಥನ್ನು ಹೊಂದಿದ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದ ಔಚಿತ್ಯದ ಬಗ್ಗೆ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ರಾಮಾನುಜ ಮತ್ತು ಡಾ.ಕೆ ಮಾಲತಿ ಅವರು ಮಾತನಾಡಿದರು.

ಕಾಲೇಜಿನ ಸ್ವಚ್ಛತಾ ಪರಿಚಾಯಕಿ ನಾಗಮ್ಮ ರವರನ್ನು ಈ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವತ್ ನಾರಾಯಣ ಗೌಡ, ಹೆಚ್.ಕೆ‌ ಪ್ರಕಾಶ್, ಡಾ. ಟಿ.ಕೆ ರವಿ ,ಎನ್.ನಾಗರಾಜು ಮತ್ತು ಮಹಿಳಾ ಉಪನ್ಯಾಸಕಿಯರಾದ ಭವ್ಯ ,ಸುಮಿತ್ರ, ಡಾ. ಸುಮಾ, ಪದ್ಮಾವತಿ, ವಸಂತ ಕುಮಾರಿ ,ವತ್ಸಲ, ರೂಪ ,ಮೀನಾ, ರಾಧಾ, ದಿವ್ಯ ಮತ್ತು ಹೆಡಿಯಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆನ್ನ ಗಂಡಸ್ವಾಮಿ ಮತ್ತು ಗಿರೀಶ್ ಉಪಸಿತರಿದ್ದರು.