ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ ಹಮ್ಮಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಮಗ್ರ ಚರ್ಚೆ ಮಾಡಲಾಯಿತು.
ಸಭೆಯನ್ನು ಕಾಲೇಜಿನ ಪ್ರಾಚಾರ್ಯರಾದ ಸಿ.ಆರ್.ದಿನೇಶ್ ಉದ್ಘಾಟಿಸಿ, ವಿದ್ಯಾರ್ಥಿಗಳ ಅಧ್ಯಯನ, ಹಾಜರಾತಿ, ಶಿಸ್ತಿನ ಅವಶ್ಯಕತೆ ಮತ್ತು ಮುಂಬರುವ ಪರೀಕ್ಷೆಗಳ ಸಿದ್ಧತೆ ಕುರಿತು ಪೋಷಕರಿಗೆ ವಿವರಿಸಿದರು.
ಆಂಗ್ಲ ಭಾಷಾ ಉಪನ್ಯಾಸಕರಾದ ರಂಗಸ್ವಾಮಿ ರವರು ಮಾತನಾಡಿ ವಿಭಾಗವಾರು ತಮ್ಮ ವಿಷಯಗಳ ಪ್ರಗತಿ ವರದಿ, ಅಂಕಪಟ್ಟಿ, ಒಳ-ಮೌಲ್ಯಾಂಕನ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಕಲಿಕಾ ದೃಢತೆಯನ್ನು ಪೋಷಕರ ಮುಂದೆ ಮಂಡಿಸಿದರು.
ವಿದ್ಯಾರ್ಥಿಗಳ ದುರ್ಬಲ ಕ್ಷೇತ್ರಗಳನ್ನು ಗುರುತಿಸಿ, ಅವುಗಳನ್ನು ಸುಧಾರಿಸುವುದಕ್ಕಾಗಿ ವಿಶೇಷ ತರಗತಿಗಳು, ಮಾರ್ಗದರ್ಶನ ಮಾಡವುದಾಗಿ ತಿಳಿಸಿದರು.
ಭೌತಶಾಸ್ತ್ರ ಉಪನ್ಯಾಸಕ ರಾಮಾನುಜ ಅವರು ಪೋಷಕರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಶಿಸ್ತಿನ ವ್ಯವಸ್ಥೆ, ಪಠ್ಯೇತರ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಒಟ್ಟು ಬೆಳವಣಿಗೆ ಕುರಿತು ಸಲಹೆಗಳನ್ನು ನೀಡಿದರು.
ಪೋಷಕರಾದ ಪವಿತ್ರ ಮತ್ತು ಕುಮಾರಸ್ವಾಮಿ ಅವರು ಪೋಷಕರ–ಶಿಕ್ಷಕರ ಸಂವಾದದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಅಗತ್ಯವಾದ ಹಲವಾರು ಸೂಚನೆಗಳನ್ನು ನೀಡಿದರು.
ಪೋಷಕರ ಸಕ್ರಿಯ ಸಹಭಾಗಿತ್ವ ಮತ್ತು ಕಾಲೇಜಿನ ಶೈಕ್ಷಣಿಕ ತಂಡದ ಸಮರ್ಪಿತ ಪ್ರಯತ್ನಗಳಿಂದ ಪೋಷಕರ ಸಭೆ ಫಲಪ್ರದವಾಗಿ ಮುಕ್ತಾಯಗೊಂಡಿತು.
ಲಿಂಗಣ್ಣ ಸ್ವಾಮಿಯವರು ಸ್ವಾಗತಿಸಿದರು ದಿನೇಶ್ ಅವರು ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಹೆಚ್ಚ್ ಕೆ ಪ್ರಕಾಶ್ ಮಾಡಿದರು.
