ಮೈಸೂರು: ಮೈಸೂರಿನ ವಾರ್ಡ್ 48ರ ಜಯನಗರ ಭಾಗದಲ್ಲಿ ಕೆಆರ್ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮನೆ,ಮನೆಗೆ ತೆರಳಿ ಜನರ ಕುಂದು,ಕೊರತೆ ಆಲಿಸಿದರು.
ಜಯನಗರ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಈ ವೇಳೆ ಶ್ರೀವತ್ಸ ಮಾತನಾಡಿ,
ಈಗಾಗಲೇ ನಿರಂತರವಾಗಿ ಕ್ಷೇತ್ರದ ಪ್ರತಿ ವಾರ್ಡಿನ ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇವೆ ಹಾಗೂ ಕೆಲವೊಂದು ಪರಿಹರಿಸಿದ್ದೇವೆ ಎಂದು ಹೇಳಿದರು.
ಇಂದು ಜಯನಗರದ ವಾರ್ಡಿನಲ್ಲೂ ಸಹ ಮನೆ ಮನೆಗೆ ಭೇಟಿ ನೀಡಿದಾಗ
ಸ್ಥಳೀಯ ನಿವಾಸಿಗಳು ರಸ್ತೆ ಬದಿಯಲ್ಲಿರುವ ಮರಗಳನ್ನು ಟ್ರಿಮ್
ಮಾಡಬೇಕು, ಚರಂಡಿಗಳಲ್ಲಿ ಹೂಳು ತೆಗೆಸಬೇಕು, ಕನ್ಸರ್ವೇಷನ್ ಗಲ್ಲಿಯನ್ನು ಸ್ವಚ್ಛಗೊಳಿಸಬೇಕು ಎಂಬುದು ಸೇರಿದಂತೆ ಹಲವು ಸಮಸ್ಯೆಗಳನ್ನು ತೋಡಿಕೊಂಡರು ಎಂದರು ತಿಳಿಸಿದರು.

ನಂತರ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗಳನ್ನು ಸರಿಪಡಿಸುವಂತೆ ಶಾಸಕರು ಸೂಚಿಸಿದರು.
ಈ ವೇಳೆ ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಪ್ರದೀಪ್,ಜೋಗಿಮಂಜು, ಕೆ.ಜೆ.ರಮೇಶ್, ಸುಜಾತಾ, ರಾಮ್ ಪ್ರಸಾದ್ , ಪ್ರದೀಪ್ ಕುಮಾರ್, ಭಾನುಪ್ರಕಾಶ್, ಕಿಶೋರ್, ಶಶಿ, ಕೀರ್ತಿ,ಆಪ್ತ ಸಹಾಯಕ ಆದಿತ್ಯ, ವಲಯ ಕಚೇರಿ 2 ರ ಸಹಾಯಕ ಆಯುಕ್ತ ನಾಗರಾಜ್, ಅಭಿವೃದ್ಧಿ ಅಧಿಕಾರಿ ಚೇತನ್ ಬಾಬು,ಇಂಜಿನಿಯರ್ ಧನುಷ್, ವಾರ್ಡಿ ಕಾರ್ಯಕರ್ತರು ಹಾಜರಿದ್ದರು.
