ಮೈಸೂರು: ಮೈಸೂರಿನಸಿದ್ಧಾರ್ಥನಗರ,
ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ವಿಜೃಂಬಣೆಯಿಂದ
ಶ್ರೀರಾಮನವಮಿ ಸಂಪನ್ನಗೊಂಡಿತು.
ಏಪ್ರಿಲ್ 6 ರಿಂದ ಪ್ರಾರಂಭವಾದ ಶ್ರೀ ರಾಮನವಮಿ ಇಂದು ಶ್ರೀ ಸೀತಾರಾಮರಿಗೆ ಪಟ್ಟಾಭಿಷೇಕ ಮತ್ತು ಶ್ರೀ ರಾಮತಾರಕ ಹೋಮದೊಂದಿಗೆ ಸಂಪನ್ನಗೊಂಡಿತು.

ಬೆಳಿಗ್ಗೆ ಪಂಚವಟಿಯಲ್ಲಿರುವ ಎಲ್ಲಾ ದೇವರುಗಳಿಗೂ ವಿಶೇಷ ಅಭಿಷೇಕ ಮತ್ತು ಸುಗಂಧ ಭರಿತ ಪುಷ್ಪಾಲಂಕಾರ ಮಾಡಲಾಯಿತು.

ಶ್ರೀ ಸೀತಾರಾಮ ಲಕ್ಷ್ಮಣ,
ಆಂಜನೇಯಸ್ವಾಮಿ, ಗಣೇಶ,
ನವಗ್ರಹಗಳು,ರಾಘವೇಂದ್ರ ಸ್ವಾಮಿ,ಸತ್ಯನಾರಾಯಣ ಸ್ವಾಮಿ,ಅಮ್ಮನವರಿಗೆ ವಿಶೇಷ ಅವಲಂಕಾರ ಮಾಡಲಾಗಿತ್ತು.


ಪೂಜಾ ಕಾರ್ಯಗಳನ್ನು ದೇವಾಲಯದ ಪುರೋಹಿತರಾದ ಅರುಣ್ ಮತ್ತು ತಂಡದವರು ನೆರವೇರಿಸಿದರೆ ಶ್ರೀರಾಮತಾರಕ ಹೋಮ ಕಾರ್ಯವು ಆನಂದ ಪುರೋಹಿತರ ತಂಡದಿಂದ ನೆರವೇರಿತು.
ಇಂದಿನ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ನಿಕಟಪೂರ್ವ ಉಪ ಮೇಯರ್ ಡಾಕ್ಟರ್ ರೂಪಾ ಅವರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಪೂಜಾಕಾರ್ಯದ ನಂತರ ಸೀತಾರಾಮ ದೇವರುಗಳನ್ನು ದೇವಾಲಯದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯದೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಭಕ್ತರು, ಭಜನಾ ತಂಡದವರು ಸ್ಥಳೀಯರು ಸಾಗಿ ಬಂದರು.

ಮೈಸೂರಿನ ಮಾರ್ವೆಲ್ ಪಿಯು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ ಹಾಗೂ ಕಾರ್ಯದರ್ಶಿ ಗಳಾದ ಡಾ.ಗಿಣಿಸ್ವಾಮಿ ಅವರು ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದರು.