ಮೈಸೂರು: ಚಾಮುಂಡೇಶ್ವರಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಜುಲೈ 7 ರಂದು ಸತ್ಯ ಹರಿಶ್ಚಂದ್ರ ನಾಟಕ ಆಯೋಜಿಸಲಾಗಿದೆ.
ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ಹಾಗೂ ದಿವಂಗತ ರಾಕೇಶ್ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಎಂ ಸತ್ಯನಾರಾಯಣ ಅವರ ಜ್ಞಾಪಕಾರ್ಥವಾಗಿ 9ನೇ ವರ್ಷದ ಸತ್ಯ ಹರಿಶ್ಚಂದ್ರ ನಾಟಕ ಆಯೋಜನೆಯಾಗಿದ್ದು ಇದರ ಪೋಸ್ಟರ್ ಅನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿದರು.
ಜುಲೈ 7 ರಂದು ಮೈಸೂರಿನ ಇಲವಾಲದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಸತ್ಯ ಹರಿಶ್ಚಂದ್ರ ನಾಟಕ ಆಯೋಜಿಸಲಾಗಿದೆ ಎಂದು ನಾಟಕ ಮಂಡಳಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಸಿನಿರಸಿಕರು ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಈ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಇಲವಾಲ ಕಾಂಗ್ರೆಸ್ ಮುಖಂಡ ಸುರೇಶ್,ನಾಗವಾಲ ಮಹೇಶ ಮತ್ತು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.