ಮೈಸೂರು: ವಿಜಯನಗರ ಎರಡನೇ ಹಂತದಲ್ಲಿರುವ ಸಮರ್ಥನಂ ವಿಶೇಷ ಚೇತನರ ಶಾಲೆಯ ಮುಖ್ಯಸ್ಥರು, ಶಿಕ್ಷಕರು,ಸಿಬ್ಬಂದಿಗೆ ಮಕ್ಕಳ ಪೋಷಕರು ಸನ್ಮಾನಿಸಿದರು.

ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ
ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಶುರು ಮಾಡಿ ಹಿರಿಯರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯಸ್ಥರಾದ ಶಿವರಾಜು ಅವರು ಪೋಷಕರು ಮತ್ತು ಮಕ್ಕಳನ್ನು ಕುರಿತು ಮಾತನಾಡಿ,ಪೋಷಕರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಶಿಕ್ಷಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೋಷಕ ವೃಂದ ವಂದನೆಗಳನ್ನು ತಿಳಿಸಿದರು..