ಮೈಸೂರು: ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಹಾಲ್ ನಲ್ಲಿ ಎಲ್ಲಿ ನೋಡಿದರಲ್ಲಿ ಶಿವಲಿಂಗುಗಳು ಎಲ್ಲರ ಗಮನ ಸೆಳೆದವು.

ಇದೇನು ಶಿವಲಿಂಗುಗಳು ಎಂಬ ಅಚ್ಚರಿ ಬೇಡಾ,ಎಲ್ಲಾ ರಂಗೋಲಿಯಲ್ಲಿ ಅರಳಿದ ಲಿಂಗುಗಳು!

ಸಮೃದ್ಧಿ ಟ್ರಸ್ಟ್ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ಮತ್ತು ಜೆ ಸಿ ಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಮಹಿಳೆಯರಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಕಿರಿಯರಿಂದ ಹಿರಿಯರವರೆಗೂ ಮಹಿಳೆಯರು ರಂಗೋಲಿಯಲ್ಲಿ ಶಿವನ
ಚಿತ್ರವನ್ನು ಬಿಡಿಸಿದ್ದಾರೆ.

ಅತ್ಯುತ್ತಮ ಐವರು ರಂಗೋಲಿ ಸ್ಪರ್ಧಿಗಳಾದ ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯ ಪುರಂನ ವನಿತಾ ಸುಭಾಷ್,ಜನಿಷಾ ಎಂ.ಎಚ್. ಹಾಗೂ ಶ್ರೀರಾಂಪುರದ ಮಂಗಳಾ ರವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ಕೆ ರಘುರಾಮ್ ವಾಜಪೇಯಿ ಅವರು,ಸಂಸ್ಕೃತಿ ಪರಂಪರೆ ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ, ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ಬೆಳೆಸಲು ಹಬ್ಬಗಳು ಸಹಕಾರಿ.ಸದೃಢ ಸ್ವಾಸ್ಥ್ಯ,ಸಮಾಜ ನಿರ್ಮಾಣಕ್ಕೆ ಇಂತಹ ಹಬ್ಬಗಳ ಮೂಲಕ ಹಮ್ಮಿಕೊಳ್ಳುವ ಸ್ಪರ್ಧೆಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
ನಗರ ಪಾಲಿಕೆ ಮಾಜಿ ಸದ್ಯಸ ಮಾ ವಿ ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್ ಶಾಲೆಯ ಸಿ ಇ ಒ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಗೌಡ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್,ಸಾಯಿರಾಂ ಫೌಂಡೇಷನ್ ಅಧ್ಯಕ್ಷೆ ಖುಷಿ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ , ವಕೀಲರಾದ ಜಯಶ್ರೀ ಶಿವರಾಮ್, ಸಂಧ್ಯಾ, ಸುಶೀಲ, ಮಹಾನ್ ಶ್ರೇಯಸ್, ಜೆ ಸಿ ಐ ಸದಸ್ಯರು ಮೋಹನ್ ರಾಚಯ್ಯ, ಗೌತಮ್ ಮತ್ತಿತರರು ಹಾಜರಿದ್ದರು.