ಮೈಸೂರು: ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ದಿವಂಗತ ಎನ್ ಸುನೀಲ್ ಕುಮಾರ್ ಅವರ 43ನೇ ಸ್ಮರಣಾರ್ಥ ರಸ್ತೆಗೆ ಅವರ ಹೆಸರನ್ನು ಇಡುವಂತೆ ವೀರಶೈವ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು ಮಹಾ ನಗರ ಪಾಲಿಕೆ ಸದಸ್ಯರಾಗಿದ್ದ ಹಾಗೂ ವೀರಶೈವ ಲಿಂಗಾಯತ ಸಮಾಜದ ನಾಯಕರಾಗಿದ್ದ ದಿವಂಗತ ಎನ್ ಸುನೀಲ್ ಕುಮಾರ್ ಅವರ 43ನೆ ಜನ್ಮ ದಿನ ಇಂದು.
ಹಾಗಾಗಿ ಸುನೀಲ್ ಕುಮಾರ್ ಅವರನ್ನು ತೇಜಸ್ವಿ ನಾಗಲಿಂಗ ಸ್ವಾಮಿ ಸ್ಮರಣೆ ಮಾಡಿದ್ದು,ಪಾಲಿಕೆ ಸದಸ್ಯರಾಗಿದ್ದ ಸುನಿಲ್ ಅವರ ಅವಧಿಯಲ್ಲಿ ಅಗ್ರಹಾರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ತಿಳಿಸಿದ್ದಾರೆ.
ಈಗಾಗಲೇ ಸುನೀಲ್ ಕುಮಾರ್ ಅವರ ಹೆಸರನ್ನು ಅಗ್ರಹಾರ ವಾರ್ಡಿನ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದರೂ ಸಹ ಸಂಭಂದ ಪಟ್ಟ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಾದರೂ ಮೈಸೂರಿನ ರಸ್ತೆಯೊಂದಕ್ಕೆ ಎನ್, ಸುನೀಲ್ ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.