ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಲೇಖನಿ,ದಿನಸಿ ವಿತರಣೆ

Spread the love

ಮೈಸೂರು: ಮೈಸೂರಿನ ‌ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ‌ ವತಿಯಿಂದ
ಎಂದಿನಂತೆ ಸಮಾಜಸೇವೆ ಮುಂದುವರಿದಿದ್ದು,ಹಣ್ಣುಹಂಪಲು, ಲೇಖನಿ ಹಾಗೂ ದಿನಸಿ ಸಾಮಗ್ರಿ ವಿತರಿಸಲಾಯಿತು.

ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್‌ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು, ಹಂಪಲು, ಲೇಖನಿ ಸಾಮಗ್ರಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯ ಪಾಲಕಿ ಗೀತಾ, ಕಾಂಗ್ರೆಸ್ ಮುಖಂಡ ಆನಂದ್, ಬಿ.ಜೆ.ಪಿ. ಮುಖಂಡ ಪುರುಷೋತ್ತಮ್,ವೀರಭದ್ರ ಸ್ವಾಮಿ, ಛಾಯಾ,ಯಶ್ವಂತ್ ಕುಮಾರ್,ಮಹದೇವ್,ಶ್ರೀಧರ್ ,ಮಹೇಶ್,ವಿನಯ್, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.