ಮೈಸೂರು: ಮೈಸೂರಿನ ನಜರಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ, ಕಳ್ಳನೊಬ್ಬನನ್ನು ಬಂಧಿಸಿ 7 ಲಕ್ಷ ರೂ ಬೆಲೆ ಬಾಳುವ ಒಟ್ಟು 11 ದ್ವಿಚಕ್ರ ವಾಹನಗಳನ್ನು
ವಶಪಡಿಸಿಕೊಂಡಿದ್ದಾರೆ.
ನಂಜನಗೂಡು ತಾಲ್ಲೋಕು,ಚಿಕ್ಕಯ್ಯನಛತ್ರ ಹೋಬಳಿ,ಹೊಸಕೋಟೆ ಗ್ರಾಮದ
ಕಾರ್ತಿಕ್ ಹೆಚ್.ವಿ (21)ಬಂಧಿತ ಆರೋಪಿ.
ಈತನಿಂದ ನಜರಬಾದ್ ಪೊಲೀಸ್ ಠಾಣೆಯ 5 ದ್ವಿಚಕ್ರ ವಾಹನ, ಆಲನಹಳ್ಳಿ ಪೊಲೀಸ್ ಠಾಣೆಯ 4 ದ್ವಿಚಕ್ರ ವಾಹನ, ಕೆ ಆರ್ ಪೊಲೀಸ್ ಠಾಣೆಯ 1 ದ್ವಿಚಕ್ರ ವಾಹನ, ನಂಜನಗೂಡು ಟೌನ್ ಪೊಲೀಸ್ ಠಾಣೆಯ 1 ಒಟ್ಟು 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಪತ್ತೆ ಕಾರ್ಯದಲ್ಲಿ ಡಿಸಿಪಿ
ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯಕ್ತ ಶಾಂತಮಲ್ಲಪ್ಪ ಎಸ್. ಕೆ ಅವರ ಉಸ್ತುವಾರಿಯಲ್ಲಿ ನಜರಬಾದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹದೇವಸ್ವಾಮಿ ಎಂ,ಪೊಲೀಸ್ ಉಪನಿರೀಕ್ಷಕರಾದ ಶ್ರೀನಿವಾಸ್ ಪಾಟೀಲ್, ನಟರಾಜು, ಸಿಬ್ಬಂದಿಗಳಾದ ಪ್ರಕಾಶ್ ಬಿ.ವಿ., ಸತೀಶ್ ಕುಮಾರ್ ಎಸ್., ರಮೇಶ್ ಪಿ ಎಸ್., ಸಂಜು ಎಂ.,ವೆಂಕಟೇಶ್ ಆರ್., ಮೊಹಮ್ಮದ್ ಇಸ್ಮಾಯಿಲ್, ಆಟೋಮೆಷನ್ ಸೆಂಟರ್ ಪಿ.ಎಸ್.ಐ ಚಂದ್ರಶೇಖರ್ ರಾವ್, ಪ್ರದೀಪ್ ಮತ್ತು ಸಿಡಿಆರ್ ಘಟಕದ ಕುಮಾರ್.ಪಿ. ಪಾಲ್ಗೊಂಡಿದ್ದರು.