ಮೈಸೂರು: ಮೈಸೂರಿನ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದಲ್ಲಿ ಮಹಿಳೆಯರು ಸಡಗರದಿಂದ ಸುಗ್ಗಿ-ಸಂಭ್ರಮ ಆಚರಿಸಿದರು.
ಸಂಘದ ವತಿಯಿಂದ ಸವಿತ ಗೌಡ ರವರ ಅಧ್ಯಕ್ಷತೆಯಲ್ಲಿ ಸುಗ್ಗಿ-ಸಂಭ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.
ಸಂಘದ ಸದಸ್ಯರು ಜಾನಪದ ನೃತ್ಯ, ಕೋಲಾಟ ಮತ್ತು ಸುಗ್ಗಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ಲಕ್ಷ್ಮಿ ಜಯರಾಮ, ರತ್ನ ನರೇಶ, ಮೀನಾಕ್ಷಿ, ಎಸ್. ಸುವರ್ಣ ಧನ್ಯಕುಮಾರ್ ಹಾಡುವ ಮೂಲಕ ಸುಗ್ಗಿ-ಸಂಭ್ರಮಕ್ಕೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಗೀತಾ ಕುಮಾರ್, ಮಂಗಳ, ಅಶ್ವಿನಿ, ರೇಣುಕಾ, ಹೇಮ, ಸುವರ್ಣ ಗಣೇಶ್, ವಿಜಯ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.