ಮೈಸೂರು: ತರಬೇತಿಯು ಉಪನ್ಯಾಸಕರನ್ನು ಪರಿಪೂರ್ಣತೆ ಕಡೆಗೆ ಕರೆದೊಯ್ಯಲಿ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಎಂ.ಮರಿಸ್ವಾಮಿ ಆಶಿಸಿದರು.
ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ
ಮೈಸೂರು ಪದವಿ ಪೂರ್ವ ಕಾಲೇಜು
ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿ ಬದುಕಿನ ಬಹುಮುಖ್ಯ ಘಟ್ಟ ವಾಗಿದ್ದು ನೀವು ಅವರ ಜ್ಞಾನ ಮಟ್ಟ ಮತ್ತು ಮನಸ್ಥಿತಿಯನ್ನು ಅರಿತು ಪಾಠ ಮಾಡಬೇಕು.ತರಗತಿಯಲ್ಲಿ ಎಲ್ಲಾ ಮಟ್ಟದ ಕಲಿಕೆಯ ಮಕ್ಕಳಿರುತ್ತಾರೆ ಅವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ಬೋಧಿಸಿದರೆ ನಿರೀಕ್ಷಿತ ಫಲಿತಾಂಶ ಬರುತ್ತದೆ ಎಂದು ಹೇಳಿದರು.
ಇಲಾಖೆಯು ಇಡೀ ರಾಜ್ಯದಲ್ಲಿ ಇಂತಹ ಪುನಶ್ಚೇತನ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.ಸರಕಾರಿ ಕಾಲೇಜುಗಳಲ್ಲಿ ಫಲಿತಾಂಶ ಉತ್ತಮವಾದರೆ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿಮ್ಮನ್ನು ಪರಿಪೂರ್ಣತೆಯ ಕಡೆಗೆ ಕರೆದೊಯ್ಯುತ್ತದೆ ಎಂದು ಮರಿಸ್ವಾಮಿ ಅಭಿಪ್ರಾಯ ಪಟ್ಟರು.
ಇತಿಹಾಸ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾರ ಹೆಚ್.ಹೆಚ್.ರಾಜೇಶ್ವರಿ, ಪ್ರಾಂಶುಪಾಲರಾದ ಸುದೀಪ್,ರಮಾನಂದ, ಎನ್.ಉದಯಶಂಕರ್,ಸಂಚಾಲಕರಾದ ಎನ್.ಎಂ.ಶಿವಪ್ರಕಾಶ್,
ಡಾ.ಮಂಗಳ ಮೂರ್ತಿ, ಸಂಪನ್ಮೂಲ ವ್ಯಕ್ತಿ ದೊಡ್ಡ ಬೋರಯ್ಯ,ಎಂ.ಎಲ್.ಉಮೇಶ್ ಉಪಸ್ಥಿತರಿದ್ದರು.
ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷರಾದ ಹೆಚ್.ಬಿ.ವಾಸು ಕಾರ್ಯಕ್ರಮ ನಿರೂಪಿಸಿದರು.ಡಾ.ಶಶಿಕಲಾ ಸ್ವಾಗತಿಸಿ, ಮಹದೇವಯ್ಯ ವಂದಿಸಿದರು.