ಮೈಸೂರು: ಮೈಸೂರಿನ ಅಗ್ರಹಾರದ ಕೆಆರ್ ಪೊಲೀಸ್ ಠಾಣೆಯ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಧನರಾಜ್ ಅಧಿಕಾರವಹಿಸಿಕೊಂಡಿದ್ದಾರೆ.
ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಧನರಾಜ್ ಅವರನ್ನು ಹಲವಾರು ಮುಖಂಡರು ಅಭಿನಂದಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, 47ನೇ ವಾರ್ಡ್ ನ ರಮೇಶ್ ರಾಮಪ್ಪ, 28ನೇ ವಾರ್ಡ್ ನ ಪ್ರಕಾಶ್, ನಿವೃತ್ತ ಪೊಲೀಸ ಅಧಿಕಾರಿ ಶ್ರೀನಿವಾಸ್, ಕನಕ ಮೂರ್ತಿ, ಪ್ರಭು ಮತ್ತಿತರರು ಹೂಗುಚ್ಛ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿದರು.