ಮೈಸೂರು: ಚಳಿ ಹಾಗೂ ಮಂಜು ಹಾಗೂ ತಣ್ಣನೆ ವಾತಾವರಣದಲ್ಲಿ ತೊಂದರೆ ಅನುಭವಿಸುತ್ತಿದ್ದ ಭಿಕ್ಷುಕರಿಗೆ,ನಿರ್ಗತಿಕರಿಗೆ, ಮತ್ತು ಕೆ ಆರ್ ಆಸ್ಪತ್ರೆ ರೋಗಿಗಳ ಆರೈಕೆಗೆ ಬಂದಿರುವವರಿಗೆ ಹೊದಿಕೆ ವಿತರಣೆ ಮಾಡಿ ಮಾನವೀಯತೆ ತೋರಲಾಗಿದೆ.
ಯೂನಿಕ್ ಯೂತ್ ಫೌಂಡೇಶನ್ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಮಂಗಳವಾರ ರಾತ್ರಿ ಹೊದಿಕೆ ಹಂಚುವ ಮೂಲಕ ಮಾನವೀಯತೆ ಮೆರೆದರು.
ಈಗಾಗಲೇ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ 15 ದಿನಗಳ ಕಾಲ ನಿರಂತರವಾಗಿ ರಾತ್ರಿ 12 ರಿಂದ 1ಗಂಟೆವರೆಗೂ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರ್ಕೆಟ್, ಹಾಡಿ ಜನಾಂಗದವರಿಗೆ, ಗುಡಿಸಲು ವಾಸಿಗಳಿಗೆ ಹೊದಿಕೆ ವಿತರಣೆ ಮಾಡುತ್ತಾ ಬರಲಾಗಿದೆ.
ಕೆಎಂಪಿಕೆ ಟ್ರಸ್ಟ್ ನವರ ಈ ಸಾಮಾಜಿಕ ಕಳಕಳಿಗೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ.
ಈಗಾಗಲೇ 300ಕ್ಕೂ ಹೆಚ್ಚು ಹೊದಿಕೆಯನ್ನು ವಿತರಿಸಲಾಗಿದೆ.
ಈ ಕುರಿತು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,
ಸ್ನೇಹಿತರ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳ ಚಳಿಗಾಲ ಸಂದರ್ಭದಲ್ಲಿ ಅಸಹಾಯಕರು ಇರುವ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ಅರಿತು ಹೊದಿಕೆ ವಿತರಿಸುತ್ತಾ ಬಂದಿದ್ದೇವೆ, ಜೊತೆಗೆ ಕೆಲವೊಂದು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೂ ಹೂದಿಕೆ ವಿತರಿಸುತ್ತೇವೆ ಎಂದು ತಿಳಿಸಿದರು.
ಈ ಸಾಮಾಜಿಕ ಕಾರ್ಯದ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಮಲೆ ಮಾದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ಶಿವು, ಯೂನಿಕ್ ಯೂತ್ ಫೌಂಡೇಶನ್ ಸಂಘಟನೆಯ ಸಂಚಾಲಕರಾದ ಮುದ್ದಸಿರ್ ಅಲಿ ಖಾನ್,ಡಾ. ಜೀಶನ್. ಧರ್ಮಶ್ರೀ,ಮುಜಕ್ಕಿರ್ ಅಲಿ ಖಾನ್,ನರ್ಗೀಸ್ ಪಠಾಣ್,ಶಹಾಬ್ ಉರ್ ರೆಹಮಾನ್,ಫೈಜಾನ್ ಅಹ್ಮದ್ ಖಾನ್,ಅಖಿಫ್,ಶಾರುಖ್,ಘೌಸ್,ಹೈದರ್ ಪಠಾಣ್ ಮತ್ತಿತರರು ಹಾಜರಿದ್ದರು.