ರೇಷ್ಮೆ ಕೃಷಿಯ ತಂತ್ರಜ್ಞಾನ ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿ:ಡಾ.ಪಿ.ದೀಪ

Spread the love

ಮೈಸೂರು: ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಬೇಕೆಂದು ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.ಪಿ.ದೀಪ ಸಲಹೆ ನೀಡಿದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮದ ಉದ್ಘಾನೆ ನಂತರ ಅವರು ಮಾತನಾಡಿದರು.

ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಸಂಸ್ಥೆಯು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದೆ. ಸಂಸ್ಥೆಯ ಆವಿಷ್ಕಾರಗಳು ರೇಷ್ಮೆ ಕೃಷಿಯ ಉತ್ಪಾದಕತೆ, ಲಾಭದಾಯಕತೆ, ಸುಸ್ಥಿರತೆಯನ್ನು ಸುಧಾರಿಸಲು ಬಹಳ ಉಪಯುಕ್ತವಾಗಿವೆ ಎಂದು ತಿಳಿಸಿದರು.

ಈ ತರಬೇತಿಯು ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ. ಈ ತರಬೇತಿಯಲ್ಲಿ ತಾವು ರೇಷ್ಮೆ ಕೃಷಿಯ ತಾಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿಬೇಕು ಎಂದು ಡಾ.ಪಿ.ದೀಪ ಕರೆ ನೀಡಿದರು.

ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರಾದ ಡಾ.ಎಸ್. ಮಂಥಿರಾ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಶಿಬಿರದ ಉದ್ದೇಶಗಳು ಹಾಗೂ ರೇಷ್ಮೆ ಮತ್ತು ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ತರಬೇತಿ ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡಿದರು.

2014 ರಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರಿನಲ್ಲಿ 7ನೇ ತಂಡದ ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವಾಗಿದೆ ಹಾಗು ಇಲ್ಲಿಯವರೆಗೆ 22 ದೇಶಗಳಿಂದ 132
ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ 8 ದೇಶಗಳ 30 ಜನರಿಗೆ ತರಬೇತಿ ನೀಡಲಾಗುವುದೆಂದರು.

ಈ ಶಿಬಿರದಲ್ಲಿ, ಈಜಿಪ್ಟ್, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಕ್ಯೂಬಾ, ಟಾಂಜಾನಿಯಾ. ಉಗಾಂಡಾ, ಥೈಲ್ಯಾಂಡ್ ದೇಶಗಳಿಂದ ಸುಮಾರು 30 ಅಭ್ಯರ್ಥಿಗಳು ಭಾಗವಹಿಸಿದ್ದಾರೆ.

ಪದ್ಮನಾಭ ನಾಯಕ್, ಸಹಾಯಕ ಕಾರ್ಯದರ್ಶಿ, ಐಎಸ್‌ಸಿ, ಡಾ.ಎಲ್.ಕುಸುಮ. ಡಾ.ಎಂ.ಎಸ್.ರಂಜನಿ. ಕಾರ್ಯಕ್ರಮದ ನೀಡಿದರು.

ವಿಜ್ಞಾನಿ ಡಾ. ಕೆ.ಎನ್.ಮಧುಸೂದನ್ ಸೇರಿದಂತೆ ಸಂಸ್ಥೆಯ ವಿಜ್ಞಾನಿಗಳು. ಅಧಿಕಾರಿಗಳು, ಸಿಬಂದ್ಧಿ, ಯೋಜನಾ ಸಹಾಯಕರು ಉಪಸ್ಥಿತರಿದ್ದರು.