ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವು

Spread the love

ಹುಣಸೂರು: ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಯಿ ನೀಲಮ್ಮ ಮಗ ಹರೀಶ್ ಮೃತಪಟ್ಟ ದುರ್ದೈವಿಗಳು.

ತಾಯಿ ಮಗ ತಮ್ಮದೇ ಜಮೀನಿನಲ್ಲಿ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದರು.ಜಮೀನಿಗೆ ಹೊಂದಿಕೊಂಡಿರುವ ಸ್ಮಶಾನದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕಕ್ಕೆ ಗ್ರೌಂಡಿಂಗ್ ಮಾಡಲಾಗಿದೆ.ಸ್ಮಶಾನಕ್ಕೆ ಅಳವಡಿಸಿರುವ ಬೇಲಿಗೆ ಗ್ರೌಂಡಿಂಗ್ ವೈರ್ ಸಂಪರ್ಕಿಸಿದೆ.

ಔಷಧಿ ಸಿಂಪಡಿಸುವ ವೇಳೆ ಬೇಲಿ ಬಳಿ ಬಂದಾಗ ನೀಲಮ್ಮಗೆ ವಿದ್ಯುತ್ ಸ್ಪರ್ಷಿಸಿದೆ.ತಾಯಿಯ ನೆರವಿಗೆ ಧಾವಿಸಿದ ಹರೀಶ್ ಗೂ ವಿದ್ಯುತ್ ಸ್ಪರ್ಷಿಸಿದೆ.ತಾಯಿ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ.

ರಾತ್ರಿ 8 ಗಂಟೆ ಆದರೂ ತಾಯಿ ಮಗ ಮನೆಗೆ ಹಿಂದಿರುಗದ ಕಾರಣ ಮನೆಯವರು ಜಮೀನಿಗೆ ತೆರಳಿ ಪರಿಶೀಲಿಸಿದಾಗ ತಾಯಿ ಮಗನ ಮೃತದೇಹ ಕಂಡುಬಂದಿದೆ.

ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.