ಮೈಸೂರಿಗೆ ಆಗಮಿಸಿದ ಭೈರತಿ‌ಸುರೇಶ್: ಭವ್ಯ ಸ್ವಾಗತ ಕೋರಿದ ಮುಖಂಡರು

ಮೈಸೂರು: ಮೈಸೂರಿಗೆ ನಗರ ಅಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ಆಗಮಿಸಿದ್ದರು.

ಶುಕ್ರವಾರ ಮೈಸೂರಿಗೆ ಭೇಟಿ ನೀಡಿದ ಭೈರತಿ ಸುರೇಶ್ ಅವರನ್ನು ರಾಡಿಸನ್ ಬ್ಲೂ ಹೋಟೆಲ್ ಮುಂಬಾಗ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹಾರಾಕಿ ಶಾಲು ಹೊಂದಿಸಿ ಸ್ವಾಗತಿಸಿದರು.

ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ್ ರಾಮಪ್ಪ, ಕಡಕೋಳ ಶಿವಲಿಂಗ, ರಾಮಚಂದ್ರು, ಗಾಂಧಿನಗರ ಪ್ರಕಾಶ್, ರವಿಚಂದ್ರ ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.