ಬೆಂಗಳೂರು: ಧ್ಯಾನ ಎಂದರೆ ಶ್ವಾಸದ ಮೇಲೆ ಗಮನ.ಧ್ಯಾನವೆಂದರೆ ಕಣ್ಣುಗಳನ್ನು ಮುಚ್ಚಿ ಅಂತರ್ಮುಖಿ ಯಾಗುವಂತಹ ಆಧ್ಯಾತ್ಮಿಕ ಕ್ರಿಯೆ.

ಧ್ಯಾನವೆಂದರೆ ನಮ್ಮೊಂದಿಗೆ ನಾವಿರುವುದು.
ಧ್ಯಾನವೆಂದರೆ ಪರಮಾತ್ಮನ ಅಂಶವಾದ ಜೀವಾತ್ಮ,ಅತ್ಮದೇವರು,
ಪ್ರಾಣದೇವರನ್ನು ಅರಿಯುವುದು ಹಾಗೂ ಅನುಭವಿಸುವುದು ಎಂದು ಹೇಳುತಗತಾರೆ ಪಿರಮಿಡ್ ಮಾಸ್ಟರ್ ನಿಖಿತಾ.
ಒಟ್ಟಾರೆ ಧ್ಯಾನವೆಂದರೆ ಅರಿವಿನ ನಿದ್ರೆ ಎಂದು ಹೇಳಬಹುದು.
ಧ್ಯಾನದ ವಿಧಾನ :
ಯಾವುದಾದರೂ ಸುಖಾಸನದಲ್ಲಿ ಹಾಯಾಗಿ ಕುಳಿತು ಎರಡೂ ಕೈಗನ್ನು ಸೇರಿಸಿಕೊಂಡು, ಕಣ್ಣು ಮುಚ್ಚಿಕೊಂಡು ಪ್ರಕೃತಿ ಸಹಜವಾಗಿ ನಡೆಯುತ್ತಲಿರುವ ಉಚ್ವಾಸ- ನಿಶ್ವಾಸ ಗಳನ್ನೇ ಗಮನಿಸುತ್ತಾ ಇರಬೇಕು.
ಶಾಂತವಾಗಿರಿ, ಶ್ವಾಸವೇ ನೀವಾಗಿರಿ, ಮೃದುವಾಗಿ ಸರಾಗವಾಗಿ ಉಸಿರನ್ನು ತೆಗೆದುಕೊಳ್ಳಿ,ಮೃದುವಾಗಿ ಸಲೀಸಾಗಿ ಉಸಿರನ್ನು ಬಿಡಿ. ನಮ್ಮ ಶ್ವಾಸವೇ ನಮ್ಮ ಗುರು.
ಶ್ವಾಸವನ್ನೇ ಗಮನಿಸುತ್ತಾ ಶ್ವಾಸ ಗುರುವಿನೊಂದಿಗೆ ಇರಿ.
ಆನಾ ಎಂದರೆ ಒಳ ಬರುತ್ತಿರುವ ಉಸಿರು,
‘ಅಪಾನ ‘ ಎಂದರೆ ಹೊರ ಹೋಗುತ್ತಿರುವ ಉಸಿರು, ಸತಿ ಎಂದರೆ ಕೂಡಿರುವುದು; ಜೊತೆ ಇರುವುದು. ಇದೇ
ಆನಾಪಾನಸತಿ ಧ್ಯಾನ ; ಸರಿಯಾದ ಧ್ಯಾನ.
ಧ್ಯಾನವನ್ನು ನಿಯಮಿತವಾಗಿ ತಪ್ಪದೇ ಮಾಡಬೇಕು, ಅವರವರ ವಯಸ್ಸಿಗೆ ಅನುಗುಣವಾಗಿ ಪ್ರತಿಯೊಬ್ಬರೂ,
ಪ್ರತಿನಿತ್ಯವೂ ಧ್ಯಾನ ಮಾಡಬೇಕು ಎಂದು ನಿಖಿತಾ ಸಲಹೆ ನೀಡಿದ್ದರೆ.
ಉದಾಹರಣೆಗೆ ೧೦ ವರ್ಷದವರು ೧೦ ನಿಮಿಷಗಳ ಕಾಲ,೨೦ ವರ್ಷದವರು ೨೦ ನಿಮಿಷಗಳ ಕಾಲ,ನಲವತ್ತು ವರ್ಷದವರು ನಲವತ್ತು ನಿಮಿಷಗಳ ಕಾಲ ಧ್ಯಾನ ಮಾಡಬೇಕು.
ಪಿರಮಿಡ್ ಮಾಸ್ಟರ್ ನಿಖಿತಾ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ,ಎರಡರಿಂದ ಮೂರು ಗಂಟೆಗಳ ಕಾಲ ಇದರ ಬಗ್ಗೆ ಅರಿವನ್ನ ಮಹಿಳೆಯರಿಗೆ ದೊಡ್ಡವರಿಗೆ ಮಕ್ಕಳಿಗೆ ಮೂಡಿಸುತ್ತಿದ್ದಾರೆ.
ಆರೋಗ್ಯವಾಗಿ ಇರಬೇಕೆಂದರೆ ಧ್ಯಾನ ಒಂದು ಪ್ರಮುಖ ಕಾರಣ.ನಿಖಿತಾ ಅವರು ಉಚಿತವಾಗಿ ಈ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ ಜೊತೆಗೆ ಆನ್ಲೈನ್ ಕ್ಲಾಸ್ ಕೂಡಾ ಮಾಡುತ್ತಿದ್ದಾರೆ.
ಈ ತರಗತಿಗೆ ಸೇರಬಯಸುವವರು ಜೂಮ್ ಮೇಕಿಂಗ್ನಲ್ಲಿ ಭಾಗವಹಿಸಬಹುದು.
ZOOM ID : 6808948844 P.W.SHAMBHAVI
ಶ್ರೀಮತಿ ನಿಖಿತಾ, ಪಿರಮಿಡ್ ಮಾಸ್ಟರ್
ಶ್ರೀ ವೀರಭದ್ರೇಶ್ವರ ಪಿರಮಿಡ್ ಧ್ಯಾನ ಮಂದಿರ,ಗುಬ್ಬಿ.ತುಮಕೂರು ಜಿಲ್ಲೆ.ಈ ವಿಳಾಸದಲ್ಲೂ ಅವರನ್ನು ಸಂಪರ್ಕಿಸಬಹುದು.