ಮಂಗಳೂರು: ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆಯದಾಯಿತು ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಆತನ ಬಂಧನ ಒಳ್ಳೆಯದೇ,ಮೊದಲು
ಆತನಿಗೆ ನಾರ್ಕೋ ಆನಾಲಿಸಿಸ್ ಪರೀಕ್ಷೆ ಮಾಡಬೇಕು ಹೇಳಿದರು.
ಅಸ್ಥಿಪಂಜರ ಪತ್ತೆ ವಿಷಯದಲ್ಲಿ ಷಡ್ಯಂತ್ರ ಇದೆ ಎಂದು ಕೆಲವರು ಹೇಳುತ್ತಿದ್ದಾರೆ,ಅದು ಏನೇ ಇದ್ದರೂ ಎಸ್ಐಟಿಯವರೇ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಚನ್ನಯ್ಯನ ವಿಷಯವಾಗಿ ಎಸ್ಐಟಿ ಅಧಿಕಾರಿಗಳು ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.