ಮಂಡ್ಯ: ಮಂಡ್ಯದ ಕಾರಸವಾಡಿ ಗ್ರಾಮದಿಂದ ಸುಮಾರು 200ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಾರೆ.
ಮಾದಪ್ಪನ ಬೆಟ್ಡಕ್ಕೆ ಪಾದಯಾತ್ರೆ ಮಾಡಿದರೆ ಮನೆಯಲ್ಲಿರುವ ಹಸು ಕರು ಕುರಿಗಳನ್ನು ರೋಗ ರುಜನ ಗಳಿಂದ ಕಾಪಾಡುತ್ತಾನೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಪಾದಯಾತ್ರೆ ಪ್ರಾರಂಭಿಸಿದ ಭಕ್ತರು ಮೊದಲು ಮಳವಳ್ಳಿಯ ದಾಸನಗೌಡ ದೊಡ್ಡಿಯಲ್ಲಿ ವಿಶ್ರಾಂತಿ ಪಡೆದು ನಂತರ ಅಂದರೆ ಬುಧವಾರ ಹನೂರು ಪಟ್ಟಣಕ್ಕೆ ತಲುಪಿದ್ದಾರೆ.
ನಾಳೆ ನ.14 ರಂದು ತಾಳುಬೆಟ್ಟ ಸ್ವಾಮಿಯವರಿಗೆ ಪೂಜಿ ಸಲ್ಲಿಸಿ, 15 ರಂದು ಮುಂಜಾನೆ 5 ಗಂಟೆಗೆ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಸ್ವಾಮಿಯ ಸನ್ನಿಧಾನಕ್ಕೆ ತೆರಳಲಿದ್ದಾರೆ.
ಕಾರ್ತಿಕ ಸೋಮವಾರದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರಸವಾಡಿ ಗ್ರಾಮಸ್ಥರು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವುದು ವಿಶೇಷ.
ಊರಿನ ಗ್ರಾಮ ದೇವರು ಬೋರಪ್ಪ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಪಾದಯಾತ್ರೆ ಹೊರಟರು.
ಬಹಳ ಹಿಂದಿನಿಂದಲೂ ಗ್ರಾಮಸ್ಥರು ಕಾರ್ತಿಕ ಸೋಮವಾರದ ಪ್ರಯುಕ್ತ ಮಲೆ ಮಾದಪ್ಪನ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುವುದು ವಾಡಿಕೆಯಾಗಿದೆ.
ದೇವರ ಸನ್ನಿಧಾನಕ್ಕೆ ಬಂದು ತಮ್ಮ ಕೈಯಲ್ಲಾದ ಸೇವೆ ಮಾಡುತ್ತೇವೆ ಎಂದು
ಹರಕೆ ಹೊತ್ತು ಅದೇ ರೀತಿ ಪ್ರತಿವರ್ಷವೂ ಸೇವೆಯನ್ನು ನೆರವೇರಿಸ್ಕೊಂಡು ಬರುತ್ತಿದ್ದಾರೆ.
ಕಾಲ್ನಡಿಗೆಯಲ್ಲಿ ಹೋಗಿ ದೈವ ದರ್ಶನವನ್ನು ಮಾಡಿಕೊಂಡು ಪುನಹ ಪಾದಯಾತ್ರೆಯ ಮೂಲಕ ತಮ್ಮ ಗ್ರಾಮವನ್ನು ಸೇರುತ್ತಾರೆ.