ಮಂಡ್ಯ: ಮಂಡ್ಯದ ಮೈ ಶುಗರ್ ಕಾರ್ಖಾನೆಗೆ ಕೋಟ್ಯಾಂತರ ರೂ ನಷ್ಟವಾದ ಹಿನ್ನಲೆಯಲ್ಲಿ
ಮೈಶುಗರ್ ಜಿಎಂ ರನ್ನ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಜಿಎಂ ಅಪ್ಪಾ ಸಾಹೇಬ ಪಾಟೀಲ್ ಗೆ ಮನೆಗೆ ಕಳಿಸಲಾಗಿದೆ.
ಕಾರ್ಖಾನೆಯ ತಾಂತ್ರಿಕ ವಿಭಾಗದ ಪ್ರಭಾರ ಜನರಲ್ ಮ್ಯಾನೇಜರ್ ಆಗಿದ್ದ ಅವರನ್ನ ತೆಗೆಯಲು ಅ. 8ರ ಮೈಶುಗರ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ನಿರ್ಣಯದಂತೆ ಅ 8ರಂದೇ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಅಪ್ಪಾ ಸಾಹೇಬ ಪಾಟೀಲ್ ವಿರುದ್ಧ ಮಂಡ್ಯ ನಗರಸಭೆ ಸದಸ್ಯ ಶಿವಕುಮಾರ್ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು.
ಅಪ್ಪಾ ಸಾಹೇಬ ಪಾಟೀಲ್ ವಿರುದ್ಧ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ಆರೋಪ ಹೊರಿಸಿ ದೂರಿ ನೀಡಿದ್ದರು.
ಶಿವಕುಮಾರ್ ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದರು.
ಅದರಂತೆ ಮುಂದಿನ ವಿಚಾರಣೆ ಕಾಯ್ದಿರಿಸಿ ಮೈ ಶುಗರ್ ಎಂಡಿ ಮಂಗಲ್ ದಾಸ್ ಅವರು ಅಪ್ಪಾ ಸಾಹೇಬ್ ಪಾಟೀಲರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ.

