ಮೈಸೂರು: ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕಬಡ್ಡಿ ಚಾಂಪಿಯನ್ ಶಿಪ್ ಗೆ ಮಹಾರಾಣಿ ಕಲಾ ಕಾಲೇಜು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ಚೆನ್ನೈನ ವಿನಾಯಕ ಮಿಷಿನ್ ಫೌಂಡೇಶನ್ ವಿಶ್ವವಿದ್ಯಾನಿಲಯದಲ್ಲಿ ಅ. 29 ರಿಂದ ನ.2ರ ವರೆಗೆ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಕಬಡ್ಡಿ ಚಾಂಪಿಯನ್ ಶಿಪ್ 2025- 26 ಕ್ಕೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವರು ಕ್ರೀಡಾಪಟುಗಳು ಮೈಸೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ.
ಪ್ರಣತಿ ಎಂ ಟಿ, ತೃತೀಯ ಬಿಎ ಇವರು ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲೂಕು, ಮುದ್ದನಕುಪ್ಪೆ ಗ್ರಾಮದ ತುಳಸಿ ರಾಮೇಗೌಡ ಮತ್ತು ವಸಂತ ಇವರ ಪುತ್ರಿ.
ಕಲ್ಪನ ಎ ಎಸ್ ತೃತೀಯ ಬಿ ಎ,ಚನ್ನಪಟ್ಟಣ ತಾಲ್ಲೂಕು,ರಾಮನಗರ ಜಿಲ್ಲೆ ಅಂಬಾಡಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ವಿಜಯ ದಂಪತಿ ಪುತ್ರಿ.
ತ್ರಿಶಾಂಕ ಪ್ರಥಮ ಬಿ ಎ
ಮಿಕ್ಕೆರೆ ಗ್ರಾಮ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ. ಪುಟ್ಟ ಮತ್ತು ಪವಿತ್ರ ದಂಪತಿಯ ಪುತ್ರಿ.
ಧನುಶ್ರೀ ಎಂ ವಿ ಪ್ರಥಮ ಬಿಎ, ಮಂಡ್ಯ ನಗರದ ಚೈತ್ರ ಮತ್ತು ವಾಸು ದಂಪತಿಯ ಪುತ್ರಿ.
ಈ ನಾಲ್ವರು ವಿದ್ಯಾರ್ಥಿನಿಯರು ಮಹಾರಾಣಿ ಮಹಿಳಾ ಕಲಾ ಕಾಲಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಮೈಸೂರು ವಿಶ್ವವಿದ್ಯಾನಿಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗೆ ಆಯ್ಕೆಯಾಗಿರುವುದು ಬಹಳ ಹೆಮ್ಮೆಯ ಸಂಗತಿ ಎಂದು ಕಾಲೇಜಿನ ಪ್ರಾಂಶುಪಾಲರು ಶ್ಲಾಘಿಸಿದ್ದಾರೆ.
ಪ್ರಾಂಶುಪಾಲರಾದ ಪ್ರೊಫೆಸರ್, ಎಂ ಎಸ್ ಅನಿತಾ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಭಾಸ್ಕರ್ ಕೆ ಎಸ್ ಮತ್ತು ಡಾ. ಮೋಹನ್ ಕುಮಾರ್ ಸಿ ಎಸ್ ಹಾಗೂ ಅಧ್ಯಾಪಕರು, ಅಧ್ಯಾಪಕೇತರ ವರ್ಗ ವಿದ್ಯಾರ್ಥಿನಿಯರ ಸಾಧನೆಯನ್ನು ಕೊಂಡಾಡಿದ್ದಾರೆ.

