ಭೂಪಾಲ್: ವಿದ್ಯಾರ್ಥಿಗಳನ್ನ ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕ ಕುಡಿದು ಚಿತ್ ಆಗಿ ರಸ್ತೆಯಲ್ಲಿ ಉರುಳಾಡಿ ಕಿರಿಕ್ ಮಾಡಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಾಲೇಜು ಪ್ರಾಧ್ಯಾಪಾಕ ಕಂಠಪೂರ್ತಿ ಕುಡಿದು ಬಂದು ನಡೆಯಲಾರದೆ ರಸ್ತೆಯಲ್ಲಿ ತೂರಾಡುತ್ತಾ, ಬಿದ್ದು ಉರುಳಾಡಿ ರಂಪಾಟ ಮಾಡಿದ ಘಟನೆ ಮಧ್ಯಪ್ರದೇಶದ ರೇವಾ ನಗರದಲ್ಲಿ ನಡೆದಿದೆ.
ಕಾಲೇಜು ಪ್ರಾಧ್ಯಾಪಕನ ಅವಸ್ಥೆ ಕಂಡು ಆತ ಮಾನಸಿಕ ಅಸ್ವಸ್ಥ ಎಂದು ಭಾವಿಸಿ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಆತ ರೇವಾ ಜಿಲ್ಲೆಯ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಧ್ಯಾಪಕ ಅಭಿಷೇಕ್ ಮಾಳವಿಯ ಎಂದು ತಿಳಿದುಬಂದಿದೆ.
ಶಿಕ್ಷಕನ ಈ ಸ್ಥಿತಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.