ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ:ಮನುಷ್ಯ ಜಾತಿಗೇ ಅವಮಾನ-ಕಾಮತ್

Spread the love

ಮೈಸೂರು: ತಿರುಪತಿ ಪ್ರಸಾದ ಲಡ್ಡು ತಯಾರಿಕೆಗೆ ಕೊಬ್ಬು ಬಳಸಿದ ವಿಷಯ ಕೇಳಿ ಬಹಳ ಬೇಸರವಾಗಿದೆ, ಇದು ಮನುಷ್ಯ ಜಾತಿಗೇ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಹೇಳಿದ್ದಾರೆ.

ಸನಾತನ ಹಿಂದೂ ಧರ್ಮದ ಪ್ರಸಿದ್ದ ದೇವಾಲಯಕ್ಕೆ ಹೇರಳವಾಗಿ ಕಾಣಿಕೆ ಬರುತ್ತಿದ್ದರೂ ಇಂತಹ ನೀಚ ಕೃತ್ಯ ಮಾಡಿರುವುದು ಅಸಹ್ಯ ಎನಿಸುತ್ತಿದೆ.

ಈ ವರದಿ ನೋಡಿ ಕರ್ನಾಟಕ ಸರ್ಕಾರ ಎಲ್ಲಾ ದೇವಸ್ಥಾನದಲ್ಲಿ ಖಡ್ಡಾಯವಾಗಿ ನಂದಿನಿ ತುಪ್ಪ ಉಪಯೋಗಿಸಬೇಕೆಂದು ಆಜ್ಞೆ ಹೊರಡಿಸಿದೆ,ಎಲ್ಲಾ ದೇವಸ್ಥಾನಗಳಿಗೆ ಆರೋಗ್ಯ ಇಲಾಖೆಯವರು ಬೇಟಿ ಕೊಟ್ಟು ಖದ್ದಾಗಿ ಪರಿಶೀಲಿಸಿ ವರದಿಯನ್ನ ಸಾರ್ವಜನಿಕವಾಗಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂತಹ ಯಾವುದಾದರೂ ಲೋಪ ಕಂಡುಬಂದರೆ ಈ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

ಒಂದು ಕಾಲದಲ್ಲಿ ನಂದಿನಿ ತುಪ್ಪವೂ ನಕಲಿಯಾಗಿ ಸಿಗುತ್ತಿತ್ತು ಹಾಗೂ ಹಲವು ಕಡೆ ಬಹಳಷ್ಟು ಆಹಾರ ಪದಾರ್ಥ, ಹಾಲು ಹಾಗೂ ಇತರ ಪದಾರ್ಥಗಳು ನಕಲಿಯಾಗಿರುವುದನ್ನ ಕೇಳಿರುತ್ತೇವೆ ಆದ್ದರಿಂದ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ಕೂಡಲೇ ಎಲ್ಲಾ ದೇವಸ್ಥಾನಕ್ಕೆ ಬೇಟಿ ಕೊಟ್ಟು ಸರಿಯಾದ ಮಾಹಿತಿ ಸಂಗ್ರಹಿಸಬೇಕು ಹಾಗೂ ನಕಲಿ ವಸ್ತು ತಯಾರಿಕಾ ಘಟಕದ ಮೇಲೆ ನಿಗಾ ಇರಿಸಿ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಕೆ ಮಹೇಶ ಕಾಮತ್ ಕೋರಿದ್ದಾರೆ.