ಮೈಸೂರು: ಈ ಕೇಸ್ ಆರ್ ಟಿ ಸಿ ಬಸ್ ಗಳಿಗೆ ಅದೇನಾಗಿದೆಯೋ, ಯಾವಾಗಲೂ ತಳ್ಳು ನೂಕು ಎಂಬಂತಾಗಿದೆ.
ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಹೊರಟಿದ್ದ ಕೆಎಸ್ಆರ್ ಟಿ ಸಿ ಬಸ್ ಜಲದರ್ಶಿನಿ ಬಳಿಯೇ ಕೆಟ್ಟು ನಿಂತಿತು.

ಚಾಲಕ ಮತ್ತು ನಿರ್ವಾಹಕರು ತಕ್ಷಣ ಬಸ್ ನಿಂದ ಕೆಳಗಿಳಿದು ರಿಪೇರಿ ಮಾಡಿಸಲು ಮೆಕ್ಯಾನಿಕ್ ಗೆ ಕರೆ ಮಾಡಿದರು, ಆದರೆ ಮೆಕ್ಯಾನಿಕ್ ಬರಲಿಲ್ಲ, ಹಾಗಾಗಿ ಅನಿವಾರ್ಯವಾಗಿ ಡ್ರೈವರ್ ನಿರ್ವಾಕನ ನೆರವಿನಿಂದ ಕನಿಷ್ಠ ಒಂದು ಗಂಟೆಗೂ ಹೆಚ್ಚು ಹೊತ್ತು ರಿಪೇರಿ ಕೆಲಸ ಮಾಡಿ ನಂತರ ಬಸ್ ಮುಂದಕ್ಕೆ ತೆಗೆದುಕೊಂಡು ಬಂದರು.
ಆದರೆ ಕಾದು ಸಾಕಾದ ಪ್ರಯಾಣಿಕರು ಡ್ರೈವರ್ ಕಂಡಕ್ಟರ್ ಜತೆ ಜಗಳಕ್ಕೆ ಬಿದ್ದರು.
ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಅವರ ಜೊತೆಯವರು ಇದನ್ನು ನೋಡಿ ಪ್ರಯಾಣಿಕರ ಜೊತೆ ಸೇರಿ ಸರ್ಕಾರಕ್ಕೆ ಮತ್ತು ಕೆಎಸ್ಆರ್ ಟಿ ಸಿಗೆ ಹಿಡಿ ಶಾಪ ಹಾಕಿದರು.
ಇದು ಒಂದು ಬಸ್ ಕಥೆಯಲ್ಲ, ಮೈಸೂರಿನಲ್ಲಿ ಸಂಚರಿಸುವ ಅದೆಷ್ಟೋ ಬಸ್ ಗಳದೂ ಇದೇ ಕಥೆಯಾಗಿದೆ. ಕೆಲವು ಬಸ್ ಗಳಲ್ಲಿ ಸೀಟುಗಳು ಕಿತ್ತುಬಂದಿದ್ದರೆ,ಮತ್ತೆ ಕೆಲ ಬಸ್ ಗಳಲ್ಲಿ ಮಳೆ ಬಂದಾಗ ಬಸ್ ಒಳಗೆ ನೀರು ಸೋರಿ ಪ್ರಯಾಣಿಕರು ಕುಳಿತುಕೊಳ್ಳಲು,ನಿಲ್ಲಲು ಆಗುವುದಿಲ್ಲ ಅಂತಹ ಪರಿಸ್ಥಿತಿ ಇದೆ.
ಈಗಾಗಲೇ ಎಸ್ ಆರ್ ಟಿಸಿ ಡ್ರೈವರ್ ಕಂಡಕ್ಟರ್ ಮತ್ತು ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ, ಅವರ ಹಾದಿ ಸರಿಯಾಗಿಯೇ ಇದೆ, ಏಕೆಂದರೆ ಬಸ್ ಗಳು ಕೆಟ್ಟುನಿಂತಾಗ ರಿಪೇರಿ ಮಾಡಿಕೊಂಡು ಜನರಿಂದ ಶಾಪ ಹಾಕಿಸಿಕೊಂಡು ಹೋಗುವ ಹಣೆಬರಹ ಅವರಿಗೆ ಏಕೆ ಬೇಕು ಎಂದು ಚಲುವರಾಜು ಪರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರುತ್ತಿದ್ದಾರೆಂದು ಅದೆಷ್ಟೋ ಕೋಟಿ ವೆಚ್ಚ ಮಾಡುತ್ತಿದ್ದೆ ಸರ್ಕಾರ. ಆದರೆ ಕೆಎಸ್ಆರ್ ಟಿಸಿ ಸಿಬ್ಬಂದಿಗಳ ಬೇಡಿಕೆಯನ್ನು ಈಡೇರಿಸುವುದಿಲ್ಲ. ಜೊತೆಗೆ ಇಂತಹ ಕೆಟ್ಟ ಬಸ್ ಗಳನ್ನು ಬದಲಾಯಿಸಿ ಹೊಸ ಬಸ್ ಗಳನ್ನು ಕೊಡುವುದೂ ಇಲ್ಲ.ಜನರ ತೆರಿಗೆ ಹಣವನ್ನು ಹೀಗೆ ಬೇಕಾಬಿಟ್ಟಿ ಫೋಲು ಮಾಡುವ ಸರ್ಕಾರ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಉತ್ತಮ ಬಸ್ ಗಳನ್ನು ನೀಡಬೇಕೆಂದು ಪ್ರಯಾಣಿಕರ ಪರವಾಗಿ ಚೆಲುವರಾಜು ಆಗ್ರಹಿಸಿದ್ದಾರೆ.