ಕೆಎಸ್ಒಯು ಕುಲಸಚಿವರ ಕಚೇರಿ ಬಾಗಿಲಿಗೆ ಹಣದ ತೋರಣ ಕಟ್ಟಿ ಪ್ರೊಟೆಸ್ಟ್

Spread the love

ಮೈಸೂರು: ಕೆಎಸ್ಒಯು ಕುಲಸಚಿವರ ಕಚೇರಿ ಬಾಗಿಲ ಮುಂದೆ ಗರಿ ಗರಿ ನೋಟುಗಳ ತೋರಣ ರಾರಾಜಿಸುತ್ತಿದೆ.

ಇದು ಏನು ಎಂಬ ಅಚ್ಚರಿಯೆ?,ಕೆಎಸ್ಒಯು ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ರೋಸಿ ಹೋದ ಸಿಬ್ಬಂದಿ ಹೀಗೆ ನೋಟಿನ ತೋರಣ ಕಟ್ಟಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಕುಲಸಚಿವರ ಕಚೇರಿ ಬಾಗಿಲಿಗೆ ಹಣದ ತೋರಣ ಕಟ್ಟಿದ ಸಿಬ್ಬಂಧಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಸಿಬ್ಬಂದಿ ವರ್ಗಾವಣೆ, ಪದನಾಮ ಬದಲಾವಣೆ, ಪದೋನ್ನತಿ ಇನ್ನಿತರ ವಿಚಾರಗಳಿಗೆ ಲಂಚದ ಬೇಡಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕುಲಸಚಿವರ‌ ವಿರುದ್ಧ ಘೋಷಣೆ ಕೂಗಿದರು.

ಈವೇಳೆ ಕೆಎಸ್ಒಯು ಸಿಬ್ಬಂದಿ ಹಾಗೂ ಕುಲಸಚಿವಾಲಯ ಅಧಿಕಾರಿಗಳ ಮದ್ಯೆ ಮಾತಿನ ಚಕಮಕಿ ಕೂಡಾ ನಡೆದಿದೆ.