ಕೆ.ಆರ್.ನಗರ: ಸಾಲ ಭಾದೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ ಆರ್ ನಗರ ತಾಲೂಕು ಕಸಬಾ ಹೋಬಳಿ ಕನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ
ಗ್ರಾಮದ ದಿವಂಗತ ರಾಜೇಗೌಡ ಅವರ ಮಗ ಪ್ರಭಾಕರ್ (65 ) ಆತ್ಮಹತ್ಯೆ ಮಾಡಿಕೊಂಡ ರೈತ.
ಬಿತ್ತನೆ ಬೀಜ ಕೆಡ ದಂತೆ ಉಪಯೋಗಿಸುವ ಕಾಳು ಮಾತ್ರೆಯನ್ನು ಸೇವಿಸಿ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ಬೆಳೆ ಸಾಲ ಪಡೆದಿದಗದರು. ಕೆನರಾ ಬ್ಯಾಂಕಿನಲ್ಲಿ ಚಿನ್ನಾಭರಣ ಸಾಲ ಮತ್ತು ಕೈ ಸಾಲ 3 ಲಕ್ಷದಷ್ಟು ಪಡೆದಿದ್ದರು.
ಇತ್ತೀಚೆಗೆ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳಗೆ ಬೆಂಕಿ ರೋಗ ಬಿದ್ದು ನಾಶವಾಗಿದ್ದು ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಕುಟುಂಬದವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮೃತ ರೈತ ಪ್ರಭಾಕರ್ ಮಗ ವಿಜಯ್ ಕುಮಾರ್ ಅವರು ಕೆ ಆರ್ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.