ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು ಆಯ್ಕೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯರವರು ಆಯ್ಕೆ ಯಾಗಿದ್ದಾರೆ.

ನ್ಯಾಯಾಲಯದ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಹಿರಿಯ ವಕೀಲರಾದ
ಮಾದಪ್ಪ ಚುನಾವಣಾಕಾರಿಗಳಾಗಿದ್ದರು.

ವಕೀಲರಾದ ಡಿ ವೆಂಕಟಾಚಲ, ಎಂ. ಮಲ್ಲಿಕಾರ್ಜುನ, ಸಿ.ಬಿ. ಮಹೇಶ್ ಕುಮಾರ್ ಹಾಗೂ ಎನ್ ಬಸವರಾಜು ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ 86 ಮತಗಳು ಚಲಾವಣೆಗೊಂಡು 40 ಮತಗಳು ಎನ್. ಬಸವರಾಜುರವರಿಗೆ ಲಭಿಸಿದ್ದರಿಂದ ಅಂತಿಮವಾಗಿ ಎನ್. ಬಸವರಾಜು ಜಯಗಳಿಸಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಳಿದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯ, ಉಪಾಧ್ಯಕ್ಷರಾಗಿ ಸೀಮಾ ತಹಸೀನಾ, ಖಜಾಂಚಿಯಾಗಿ ಅಮೃತ ರಾಜ್, ಸಹ ಕಾರ್ಯದರ್ಶಿಯಾಗಿ ವಿನಯ್ ಅವರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಸಿ.ರವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಬಿ.ಮಹೇಶ್ ಕುಮಾರ್ ಅವರ ಅವಧಿ ಕಳೆದ ಜುಲೈಗೆ ಮುಕ್ತಾಯ ಕೊಂಡಿದ್ದರ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಚುನಾವಣೆ ನಡೆಯಿತು.