ಉಪ ಅರಣ್ಯ ಸಂರಕ್ಷಣಾಧಿಕಾರಿ ಬಗ್ಗೆ ಆರ್.ನರೇಂದ್ರ ಹೇಳಿಕೆ:ಉಪ್ಪಾರ ಸಂಘ ಕಿಡಿ

ಕೊಳ್ಳೇಗಾಲ: ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎಂಬುದು ಧೃಡಪಟ್ಟಿದ್ದರೂ ಮಾಜಿ ಶಾಸಕ ಆರ್. ನರೇಂದ್ರ ಅವರು ಏನೇನೊ ಹೇಳಿಕೆ ನೀಡಿದ್ದಾರೆಂದು ತಾಲೂಕು ಭಗೀರಥ ಉಪ್ಪಾರ ಸಂಘ ಕಿಡಿಕಾರಿದೆ.

ಯಾರದೋ ಪ್ರಭಾವಕ್ಕೆ ಒಳಗಾಗಿ ಹತಾಶೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರ ಮೇಲೆ ಇಲ್ಲ – ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ನರೇಂದ್ರ ಅವರ ಆರೋಪವನ್ನು ತಾಲೂಕು ಭಗೀರಥ ಉಪ್ಪಾರ ಸಂಘ ತಳ್ಳಿಹಾಕಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೊಳ್ಳೇಗಾಲ ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ ಅವರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಒಬ್ಬ ದಕ್ಷ ಪ್ರಾಮಾಣಿಕ, ಖಡಕ್ ಅಧಿಕಾರಿ. ಅವರ ಬಗ್ಗೆ ಆರ್ ನರೇಂದ್ರ ದುರುದ್ದೇಶದಿಂದ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ.
ಎಂದು ತಿಳಿಸಿದ್ದಾರೆ.

ದಲಿತ ಹಾಗೂ ಹಿಂದುಳಿದ ಜನಾಂಗದ ವ್ಯಕ್ತಿಗಳು ಉನ್ನತ ಅಧಿಕಾರದಲ್ಲಿರುವವುದನ್ನು ಸಹಿಸದ ಕೆಲವರು ಚಕ್ರಪಾಣಿಯವರ ವಿರುದ್ಧ ಅವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಂದಿನಿಂದಲೂ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು ನರೇಂದ್ರರ ಕೆಳ ಹಂತದ ಅಧಿಕಾರಿಗಳೊಂದಿಗಿನ ಸಮನ್ವಯದ ಕೊರತೆಯಿಂದ ಈ ರೀತಿ ಆಗಿದೆ ಎಂಬುದಕ್ಕೆ ಅವರ ಹೇಳಿಕೆಯೇ ಸಾಕ್ಷಿ ಎಂದಿದ್ದಾರೆ.

ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂದು ಈಗಾಗಲೇ ತನಿಖೆಯಿಂದ ಧೃಡಪಟ್ಟಿದೆ. ಆದರೆ ನರೇಂದ್ರ ಅವರು ಯಾರದೋ ಪ್ರಭಾವಕ್ಕೊಳಗಾಗಿ ಹತಾಶೆಯಿಂದ ಇಲ್ಲ – ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲವೆಂದು ನರೇಂದ್ರರವರ ಆರೋಪವನ್ನು ತಾಲೂಕು ಭಗೀರಥ ಉಪ್ಪಾರ ಸಂಘ ಖಂಡಿಸಿದೆ.