ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಅನೇಕ ಸಂಘ-ಸಂಸ್ಥೆಗಳು ಜನರಿಗೆ ಪ್ರಸಾದ ವಿತರಿಸುವುದು ಸರ್ವೇ ಸಾಮಾನ್ಯ.
ಆದರೆ ಪ್ರಾಣಿಗಳಿಗೂ ಆಹಾರ ನೀಡುವ ಮೂಲಕ ಕೆಎಂಪಿಕೆ ಟ್ರಸ್ಟ್ ಇತರರಿಗೆ ಮಾದರಿಯಾಗಿದೆ.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ಅವರು ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಂದು ವಾನರಗಳಿಗೆ ಕಡಲೆಕಾಯಿ ಹಾಗೂ ಬಾಳೆ ಹಣ್ಣುಗಳನ್ನು ನೀಡಿ ಭಕ್ತಿಯ ಜೊತೆ ಪ್ರಾಣಿ ಪ್ರೇಮ ಮೆರೆದ್ದಾರೆ.
ವಾನರಗಳೂ ಕೂಡಾ ಖುಷಿಯಿಂದ ಬಂದು ಬಾಳೆಹಣ್ಣು, ಕಡಲೆಕಾಯಿ ತಿಂದು ಹಸಿವು ನೀಗಿಸಿಕೊಂಡವು.