ಮೈಸೂರು: ಕರ್ನಾಟಕ ವಿಪ್ರ ವಕೀಲರ ವೇದಿಕೆ ಟ್ರಸ್ಟ್ ವತಿಯಿಂದ ನೆಲೆ ಅಜಿತನ ಅನಾಥ ಗಂಡು ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕೆ.ವಿ. ರವಿಚಂದ್ರನ್ ಅವರು, ಸಮಾಜದಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕಬೇಕು,ಪರಸ್ಪರ ಸಹಕಾರದಿಂದ ಬದುಕಿದರೆ ಮಾತ್ರ ಸ್ವಾಸ್ತ್ಯ ಸಮಾಜ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಜಯಶ್ರೀ ಶಿವರಾಮ್ ಅವರು ಮಾತನಾಡಿ, ಇಂದು ನಮಗೆ ಬಹಳ ಸಂತೋಷವಾಗುತ್ತಿದೆ ಅನಾಥಾಲಯಗಳು ಎಂದಿಗೂ ಅನಾಥವಲ್ಲ ಅವೆಲ್ಲವೂ ಸಾರ್ವಜನಿಕ ಆಲಯಗಳು ಎಂದು ತಿಳಿಸಿದರು.
ಸಂಘ ಸಂಸ್ಥೆಗಳು ಇಂತಹ ವಸತಿ ನಿಲಯಗಳಿಗೆ ಬೇಟಿ ನೀಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು, ಸಮಾಜ ಎಂದಿಗೂ ನಿಮ್ಮೊಂದಿಗೆ ಇದೆ ಎಂಬ ನಂಬಿಕೆ ಅವರಲ್ಲಿ ಬೆಳೆಸಬೇಕು ಎಂದು ಹೇಳಿದರು.
ನಮ್ಮ ಸಾಮಾಜಿಕ ಕರ್ತವ್ಯವಾಗಿ ಇಂದು ಉಪಹಾರದ ವ್ಯವಸ್ಥೆ ನಾವು ಮಾಡಿದ್ದೇವೆ. ಇಂತಹ ಸೇವಾ ಚಟುವಟಿಕೆಗಳನ್ನು ಪ್ರಚಾರಕ್ಕಾಗಿ ಮಾಡದೆ ಪ್ರೇರಣೆಗಾಗಿ ನಾವು ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಕೆ.ಆರ್. ಶಿವಶಂಕರ್, ಕಾರ್ಯದರ್ಶಿ ನಟರಾಜ್, ರಾಜಲಕ್ಷ್ಮಿ, ಎನ್.ಆರ್. ಲಕ್ಷ್ಮೀ, ಪ್ರಕಾಶ್, ಲಕ್ಷ್ಮೀ ಪ್ರಸಾದ್ ಉಪಸ್ಥಿತರಿದ್ದರು.