ಕರ್ನಾಟಕ ಸೇನಾ ಪಡೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

Spread the love

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಅನ್ನು ಮೈಸೂರಿನ ವಿಜಯನಗರದಲ್ಲಿರುವ, ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲಾಯಿತು.

ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಡಾ. ಭಾಷ್ಯಂ ಸ್ವಾಮೀಜಿ
ಅವರ ದಿವ್ಯ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಕರ್ನಾಟಕ ಸೇನಾ ಪಡೆಯ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಈ ವೇಳೆ ಯೋಗಾ ನರಸಿಂಹಸ್ವಾಮಿ ದೇವಸ್ಥಾನದ ಶ್ರೀನಿವಾಸ್,
ಡಾ. ರಘುರಾಂ ಕೆ ವಾಜಪೇಯಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ ಜಿ ಗಂಗಾಧರ್, ಎಂ ಬಿ ಮಂಜೇಗೌಡ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಎಂ ಎನ್ ದೊರೆಸ್ವಾಮಿ, ಮಡ್ಡೀಕೆರೆ ಗೋಪಾಲ್, ಶ್ರೀ ಲಕ್ಷ್ಮಿ ನಾರಾಯಣ ಶೆಣೈ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ಮೊಗಣ್ಣಾಚಾರ್, ಡಾ. ಶಾಂತರಾಜೇಅರಸ್, ಕೃಷ್ಣಪ್ಪ, ಪ್ರಭುಶಂಕರ, ನೇಹಾ, ಪ್ರಜೀಶ್, ನಾಗರಾಜು, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್ ಹನುಮಂತಯ್ಯ ,ಸುಬ್ಬೇಗೌಡ, ಡಾ. ನರಸಿಂಹೇ ಗೌಡ, ಪದ್ಮಾ, ಪ್ರಭಾಕರ್, ಶಿವಲಿಂಗಯ್ಯ, ನಂದಕುಮಾರ್, ಕುಮಾರ್, ರಘು ಅರಸ್, ಮಹಾದೇವ ಸ್ವಾಮಿ, ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.