ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಕಜಾಪ ಒತ್ತು:ಡಾ.ಜಾನಪದ ಬಾಲಾಜಿ.

Spread the love

ಧಾರವಾಡ: ಕನ್ನಡ ಜಾನಪದ ಪರಿಷತ್ ವೇದಿಕೆ ಕಾರ್ಯಕ್ರಮಗಳಿಗಿಂತ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಅಧ್ಯಕ್ಷ ಡಾ.ಜಾನಪದ ಬಾಲಾಜಿ ತಿಳಿಸಿದರು.

ಜಾನಪದ ಯುವ ಬ್ರಿಗೇಡ್ ವತಿಯಿಂದ ಶ್ರೀ ರಾ.ಹ.ಕೊಂಡಕೇರ ಅವರ ನಿವಾಸದಲ್ಲಿ ನಡೆದ ಮನ – ಮನೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ.ಜಾ.ಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕ.ಸಾ.ಪ ಧಾರವಾಡ ಜಿಲ್ಲಾ ಅಧ್ಯಕ್ಷರು,ಕೋಶಾಧ್ಯಕ್ಷರು,
ಉದಯೋನ್ಮುಖ ಗಾಯಕ ಶ್ರೀ ನಿಜಗುಣಿ ಮಂಗಿ,ಹಾಗೂ ಜಾನಪದ ಕಲಾವಿದೆ,ಸೂಲಗಿತ್ತಿ ಚಂದ್ರವ್ವ .ದು.ಹಾದಿಮನಿ ಇವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಉಪಸ್ಥಿತರಿದ್ದ ಎಲ್ಲ ಗಣ್ಯರು ಜಾನಪದದ ಪ್ರಚಾರ ಮತ್ತು ಸಂರಕ್ಷಣೆ ಕೆಲಸವನ್ನು ಧಾರವಾಡ ಜಾನಪದ ಯುವ ಬ್ರಿಗೇಡ್ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಧಾರವಾಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಶ್ರೀ ಮಹೇಶ ಎಸ್ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸಹ ಸಂಚಾಲಕರು ಹಾಗೂ ಕಾರ್ಯಕ್ರಮ ಆತಿಥ್ಯ ವಹಿಸಿದ್ದ ಶ್ರೀ ರಾ.ಹ.ಕೊಂಡಕೇರ,ನೈ.ರೈ.ಕ.ಸಂಘದ ಕಾರ್ಯದರ್ಶಿ ಸುರೇಶ ಹೀರೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.